ಸವಣೂರು ವಲಯದ ಜನಜಾಗೃತಿ ಮತ್ತು ನವಜೀವನ ಸಮಿತಿ ಸಭೆ; ನೂತನ ಅಧ್ಯಕ್ಷರಾಗಿ ರಾಮಚಂದ್ರ ಇಡ್ಯಡ್ಕ ಆಯ್ಕೆ

0

ಸವಣೂರು : ಕಡಬ ತಾಲೂಕು ಸವಣೂರು ವಲಯದ ಜನಜಾಗೃತಿ ಮತ್ತು ನವಜೀವನ ಸಮಿತಿ ಹಾಗೂ ನೂತನ ಒಕ್ಕೂಟದ ಅಧ್ಶಕ್ಷರ ಸಭೆಯು ಸವಣೂರು ಯುವಕ ಮಂಡಲದ ಯುವಸಭಾ ಭವನದಲ್ಲಿ ಡಿ.15ರಂದು ನಡೆಯಿತು.

ಜನಜಾಗೃತಿ ಸವಣೂರು ವಲಯ ಅಧ್ಯಕ್ಷ, ಕಾನೂನು ಸಲಹೆಗಾರ ಮಹೇಶ್ ಕೆ. ಸವಣೂರು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕಾರ್ಯಕ್ರಮವನ್ನು ಸವಣೂರು ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ವೇಣುಗೊಪಾಲ ಕಳುವಾಜೆ ಅವರು ಉದ್ಘಾಟಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಅವರು ಡಿ.23ರಂದು ನಡೆಯಲಿರುವ ಪುತ್ತೂರು ಕಡಬ ತಾಲೂಕು ಕೇಂದ್ರ ಒಕ್ಕೂಟದ ಪದಗ್ರಹಣ ಹಾಗೂ ನವಜೀವನ ಸಮಾವೇಶದ ಪೂರ್ವ ತಯಾರಿಯ ಕುರಿತು ಮಾತನಾಡಿದರು.

ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಯನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ವಲಯದ ಜನಜಾಗೃತಿ ಮಾಜಿ ಅಧ್ಯಕ್ಷ ಸುರೇಶ್ ರೈ ಸೂಡಿಮೂಳ್ಳು ಹಾಗೂ ನಿರ್ದೇಶಕರಾದ ಗಿರಿಶಂಕರ ಸುಲಾಯವರು ಉಪಸ್ಥಿತರಿದ್ದರು.

ಸೇವಾಪ್ರತಿನಿಧಿ ಮನೋರಮಾ ಸ್ವಾಗತಿಸಿ, ಪ್ರೇಮಾ ವಂದಿಸಿದರು. ನೂತನ ಅಧ್ಯಕ್ಷರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸವಣೂರು ವಲಯದ ನೂತನ ಅಧ್ಯಕ್ಷರಾಗಿ ರಾಮಚಂದ್ರ ಅವರು ಆಯ್ಕೆಯಾದರು.

ಸಭೆಯಲ್ಲಿ ವಲಯದ ಒಕ್ಕೂಟಗಳ ಅಧ್ಶಕ್ಷರುಗಳು, ನವಜೀವನ ಗ್ರಾಮ ಸಮಿತಿ ಅಧ್ಶಕ್ಷರುಗಳು, ಪ್ರಭಾರ ಮೇಲ್ವಿಚಾರಕಿ ಸುನೀತಾ ಹಾಗೂ ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here