ಲವ್ ಜಿಹಾದ್ ವಿರೋಧಿ ಪೊಲೀಸ್ ದಳ ರಚಿಸಲು ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

0

ಕಡಬ: ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಸಂಘಟನೆಗಳು ವತಿಯಿಂದ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ, ‘ಲವ್ ಜಿಯಾದ್’ ಘಟನೆಗಳನ್ನು ತಡೆಯಲು ವಿಶೇಷ’ ಲವ್ ಜಿಯಾದ್ ‘ವಿರೋಧಿ ಪೊಲೀಸ್ ದಳವನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ, ಕಡಬ ತಾಲೂಕು ಕಚೇರಿಯಲ್ಲಿ ಉಪ ತಹಸೀಲ್ದಾರ್ ಕೆ.ಟಿ ಮನೋಹರ್ ರವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿಯನ್ನು ಡಿ.17ರಂದು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನಂದು ಗುರಿ, ಹಿಂದೂ ಸಂಘಟನೆ ಪ್ರಮುಖ ರಘು ರಾಮ ನಾಯ್ಕ್ ಕುಕ್ಕೆರೆ ಬೆಟ್ಟು ,ಗುರು ಹೆಬ್ಬಾರ್ ಹೊಸಮಠ , ವಕೀಲರಾದ ಪ್ರಶಾಂತ್ ಪಂಜೋಡಿ , ಹಿಂದೂ ಜನಜಾಗೃತಿಯ ಶಾಂತಪ್ಪ ಗೌಡ ಹಾಗೂ ಬಾಲಕೃಷ್ಣ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here