ಮಾ. 3: ಆಲಡ್ಕ ಶ್ರೀ ಸದಾಶಿವ ದೇವಸ್ಥಾನ ಜಾತ್ರೋತ್ಸವ – ಸಮಿತಿ ರಚನೆ :ಅಧ್ಯಕ್ಷರಾಗಿ ರಾಘವ ಗೌಡ ಕೆರೆಮೂಲೆ, ಪ್ರ.ಕಾರ್ಯದರ್ಶಿ ಮಹಾಬಲ ರೈ ಕುಕ್ಕುಂಜೋಡು

0

ಪುತ್ತೂರು; ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ 2023 ಮಾರ್ಚ್ 3 ರಂದು ಪ್ರಥಮ ವಾರ್ಷಿಕ ಜಾತ್ರೋತ್ಸವ ನಡೆಯಲಿದೆ. 100 ವರ್ಷದ ಬಳಿಕ ಪ್ರಪ್ರಥಮವಾಗಿ ಈ ಜತ್ರೋತ್ಸವ ನಡೆಯಲಿದೆ. ಜಾತ್ರೋತ್ಸವ ಕಾರ್ಯಕ್ರಮಕ್ಕೆ ನೂತನ ಸಮಿತಿಯನ್ನು ರಚನೆ ಮಾಡಲಾಗಿದೆ.

ಅಧ್ಯಕ್ಷರಾಗಿ ರಾಘವ ಗೌಡ ಕೆರೆಮೂಲೆ, ಉಪಾಧ್ಯಕ್ಷರಾಗಿ ಜಯಾನಂದ ರೈ ಮಿತ್ರಂಪಾಡಿ, ದನಂಜಯಕುಲಾಲ್, ಉಮೇಶ್ ನಾಯ್ಕ ಬಳ್ಳಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಮಹಾಬಲ ರೈ ಕುಕ್ಕುಂಜೋಡು, ಜೊತೆ ಕಾರ್ಯದರ್ಶಿಯಾಗಿ ಮೋಹನ್ ರೈ ಕೆದಂಬಾಡಿಗುತ್ತು, ಕೋಶಾಧಿಕಾರಿಯಾಗಿ ಅರುಣಕುಮಾರ್ ಆಳ್ವ ಬೋಳೋಡಿ, ಗೌರವ ಸಲಹೆಗಾರರಾಗಿ ಸುರೇಶ್ ಕಣ್ಣಾರಾಯ, ಬನೇರಿ, ಬಿ ವಿ ಶಗ್ರಿತ್ತಾಯ ಬಾಳಯ, ಮುರಳೀಧರ್ ಭಟ್ ಬಂಗಾರಡ್ಕ,ಭಾಸ್ಕರ ಬಲ್ಲಾಳ್ ಕೆದಂಬಾಡಿ ಗುತ್ತು, ಶೀನಪ್ಪ ರೈ ಕೊಡೆಂಕಿರಿ, ರತನ್‌ರೈ ಕುಂಬ್ರ, ಹೇಮನಾಥ ಶೆಟ್ಟಿ ಕಾವು, ಜೈಶಂಕರ ರೈ ಬೆದ್ರುಮಾರು, ಜಯರಾಮ ರೈ ಮಿತ್ರಂಪಾಡಿ,ಲಲಿತ ಕುಕ್ಕಿನಡ್ಕ, ಶಂಕರ ಕಡ್ಯ ಆಲಡ್ಕರವರನ್ನು ನೇಮಕ ಮಾಡಲಾಗಿದೆ.

ಸಭೆಯು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅರುಣ್‌ಕುಮಾರ್ ಆಳ್ವ ಬೋಳೋಡಿ ಅಧ್ಯಕ್ಷತೆಯಲ್ಲಿ ದೇವಳಧ ವಠಾರದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here