ಪುತ್ತೂರು: ಸರಕು ಸಾಗಾಟದ ಕೆಲವು ವಾಹನಗಳಲ್ಲಿ ಉದ್ದೇಶ ಪೂರ್ವಕವಾಗಿ ನಂಬರ್ ಪ್ಲೇಟ್ ಇಲ್ಲದೇ ಅಥವಾ ಜೀರ್ಣಾವಸ್ಥೆಯಲ್ಲಿರುವ ನಂಬರ್ ಪ್ಲೇಟ್ಗಳನ್ನು ಅಳವಡಿಸಿರುತ್ತಾರೆ. ಇದರಲ್ಲಿ ಅಕ್ರಮ ಸಾಗಾಟಗಳು ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಗ್ರಾಹಕರಿಗೆ, ಪೊಲೀಸ್ ಉಪ ಅಧೀಕ್ಷಕರಿಗೆ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಗುಜರಿ ಸಾಗಾಟ ಅಥವಾ ಇನ್ನಿತರ ಕೆಲವು ವಾಹನಗಳಲ್ಲಿ ಜನರಿಗೆ ವಾಹನದ ನೋಂದಣಿ ಸಂಖ್ಯೆಗಳನ್ನು ಗುರುತಿಸಲಾಗದಂತೆ ಮಾಡಿ ಇಂತಹ ವಾಹನಗಳಲ್ಲಿ ಅಕ್ರಮ ಸಾಗಾಟದಂತ ಚಟುವಟಿಕೆಗಳನ್ನು ನಡೆಸುತ್ತಾರೆ, ಸಾರ್ವಜನಿಕರಿಗೆ ಇಂತಹ ಸಂದರ್ಭ ಸಂಬಂಧ ಪಟ್ಟ ಇಲಾಖೆಗಳಿಗೆ ದೂರು ನೀಡಲು ಕೂಡ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇಂತಹ ವಾಹನಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕಾಗಿ ಕಲಿಯುಗ ಸೇವಾ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ.