ಪವಿತ್ರ ಉಮ್ರಾ ಯಾತ್ರೆಗೆ ತೆರಳುವ ಸಾಲ್ಮರ ಸೈಯದ್ ಮಲೆ ಜುಮ್ಮಾ ಮಸ್ಜಿದ್‌ನ ಅಧ್ಯಕ್ಷರಿಗೆ ಅಭಿನಂದನೆ

0

ಪುತ್ತೂರು: ಪವಿತ್ರ ಉಮ್ರಾಯಾತ್ರೆಗೆ ಕುಟುಂಬ ಸಮೇತರಾಗಿ ತೆರಳುತ್ತಿರುವ ಸಾಲ್ಮರ ಸೈಯದ್ ಮಲೆ ಜುಮ್ಮಾ ಮಸ್ಜಿದ್‌ನ ಅಧ್ಯಕ್ಷ ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರರವರನ್ನು, ಸೈಯ್ಯದ್ ಮಲೆ ಜಮಾತ್ ಕಮೀಟಿಯ ವತಿಯಿಂದ ಜುಮ್ಮಾ ನಮಾಝ್‌ನ ನಂತರ ಸೈಯ್ಯದ್ ಅಲ್ ಹಾಜ್ ಮುಹಮ್ಮದ್ ತಂಙಳ್ ಸಾಲ್ಮರರವರು ಶಾಲು ಹೊದಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಉಸ್ತಾದ್ ಅಲ್ ಹಾಜ್ ಉಮ್ಮರ್ ದಾರಿಮಿ ಸಾಲ್ಮರ, ಮಸೀದಿಯ ಉಪಾದ್ಯಕ್ಷರಾದ ಇಸ್ಮಾಯಿಲ್ ಸಾಲ್ಮರ, ಶರೀಪ್ ಸಾಲ್ಮರ, ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ, ಕೋಶಾಧಿಕಾರಿ ಮುಹಮ್ಮದ್ ಕೋಲ್ಪೆ, ಜಮಾತ್ ಕಮೀಟಿಯ ಸದಸ್ಯರು, ಕುವ್ವತುಲ್ ಇಸ್ಲಾಂ ಯುವಕ ಸಮೀತಿಯ ಅದ್ಯಕ್ಷರಾದ ಉಸ್ಮಾನ್ ಕೆರೆಮೂಲೆ, ಅಬ್ದುಲ್ ಹಮೀದ್ ಸಾಲ್ಮರ, ಮಾಜಿ ಅಧ್ಯಕ್ಷ ಸುಲೇಮಾನ್ ಹಾಜಿ ಸಾಲ್ಮರ, ಯಹಿಯಾ ಸಾಲ್ಮರ, ಹಸನ್ ಮುದ್ದೋಡಿ, ಕಬೀರ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here