ಅಪಘಾತ: ಒಂದು ಸಾವು, ಐದು ಮಂದಿಗೆ ಗಾಯ

0

ಮಂಗಳೂರು :ಅನಿರಿಕ್ಷಿತವಾಗಿ ಸಿಗ್ನಲ್‌ ಬಿದ್ದ ಕಾರಣ ವೇಗವಾಗಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಡಿವೈಡರ್‌ ದಾಟಿ  ಎದುರಿನಿಂದ ಬರುತಿದ್ದ ಬೈಕ್‌ ಮತ್ತು ಸ್ಕೂಟಿಗೆ ಡಿಕ್ಕಿ ಹೊಡೆದ ಘಟನೆ ಸುರತ್ಕಲ್‌ ಸಮೀಪದ ಕುಳಾಯಿ ಹೊನ್ನಕಟ್ಟೆ ಎಂಬಲ್ಲಿ ನಡೆದಿದೆ. ಘಟನೆಯಿಂದ  ದ್ವಿಚಕ್ರ ವಾಹನಗಳಲ್ಲಿದ್ದ ಒರ್ವ ಮಹಿಳೆ ಮತ್ತು ಇಬ್ಬರು ಪುರುಷರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2)  ಬೆಳ್ತಂಗಡಿ :ಶಾಲಾ ಬಸ್ಸು ಮತ್ತು ಗೂಡ್ಸ್‌ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಒರ್ವ ವೈಕ್ತಿ ಸಾವನ್ನಪ್ಪಿದ್ದು ಇನ್ನಿಬ್ಬರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿಯ ಕೊಯ್ಯೂರು ಗ್ರಾಮದ ಮಲೆಬೆಟ್ಟು ಎಂಬಲ್ಲಿ ಇಂದು ಡಿ. 24 ರಂದು ಬೆಳಿಗ್ಗೆ ನಡೆದಿದೆ. ಮೃತಪಟ್ಟ ವೈಕ್ತಿಯನ್ನು ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ರಝಾಕ್‌ (50) ಎಂದು ಗುರುತಿಸಲಾಗಿದೆ ಮತ್ತು ಗಂಭೀರ ಗಾಯಗೊಂಡವರನ್ನು ಪಿಲಿಚಾಮುಂಡಿಕಲ್ಲು ನಿವಾಸಿ ಹನೀಫ್‌ (48) ಮತ್ತು ಪಣಕಜೆ ನಿವಾಸಿ ಮೊಹಮ್ಮದ್‌ (57)  ಎಂದು ಗುರುತಿಸಲಾಗಿದೆ.

LEAVE A REPLY

Please enter your comment!
Please enter your name here