ಚಿಕ್ಕಮುಡ್ನೂರು ಆರಿಗೊ ಶ್ರೀ ಬೈದೇರುಗಳ ನೇಮೋತ್ಸವದ ಗೊನೆಮುಹೂರ್ತ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ಆರಿಗೊ ಪೆರ್ಮಂಡ ಗರೋಡಿಯಲ್ಲಿ ವರ್ಷಂಪ್ರತಿ ಜ.1ರಿಂದ 5 ರವರೆಗೆ ನಡೆಯಲಿರುವ ಶ್ರೀ ಬೈದೇರುಗಳ ನೇಮೋತ್ಸವದ ಅಂಗವಾಗಿ ಡಿ.26 ರಂದು ಬೆಳಿಗ್ಗೆ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮತ್ತು ಡಾ. ಎಮ್ ಅಶೋಕ್ ಪಡಿವಾಳ್ ಮೂಡಾಯೂರುಗುತ್ತು ಕುಟುಂಬಸ್ಥರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಗೊನೆ ಮುಹೂರ್ತ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ನರೇಂದ್ರ ಪಡಿವಾಳ್ ಮೂಡಾಯೂರು ಗುತ್ತು, ಬಾಳಪ್ಪ ಪೂಜಾರಿ ಕೇಪುಳು, ಶ್ರೀಧರ ಪೂಜಾರಿ ಬಡಾವು, ರಘುನಾಥ ರೈ ಏಕ, ಅಣ್ಣಿ ಪೂಜಾರಿ ಕೇಪುಳು, ರಾಜು ಗೌಡ ಕಟ್ಟೆದಮಜಲು, ತಿಮ್ಮಪ್ಪ ಗೌಡ ಕಟ್ಟೆಮಜಲು, ರಾಜೇಶ್ ಪೂಜಾರಿ ಬಡಾವು, ರಾಜೇಶ್ ಪೂಜಾರಿ ಆರಿಗ, ಜಗದೀಶ್ ಆರಿಗ, ಅಣ್ಣಿ ಪೂಜಾರಿ ಆರಿಗ, ಗಂಗಾಧರ ಪೂಜಾರಿ ಅನಂತಿಮಾರು, ವಸಂತ ಪೂಜಾರಿ ಅನಂತಿಮಾರು, ಅಶೋಕ್ ಆರಿಗ, ಸುಂದರ ಪೂಜಾರಿ ಅನಂತಿಮಾರು ಹಾಗೂ ದೈವದ ಪಾತ್ರಿಗಳಾದ ಶೀನಪ್ಪ ಪುಜಾರಿ ಆರಿಗ, ವಿಶ್ವನಾಥ ಪೂಜಾರಿ ಬಲಕ್ಕ, ಸಂದೀಪ್ ಆರಿಗ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here