ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದಿಂದ ಧನ ಸಹಾಯ

0

ಪುತ್ತೂರು: ಬೈಕ್ ಅಪಘಾತದಲ್ಲಿ ಗಾಯಗೊಂಡು ಕೈ ಮೂಳೆ ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನಾಗೇಶ್ ಬೆಳ್ಳಾರೆಯವರಿಗೆ ಚಿಕಿತ್ಸೆಗೆ ಸುಮಾರು 2 ಲಕ್ಷಕ್ಕಿಂತ ಅಧಿಕ ಖರ್ಚು ಆಗಿದ್ದು, ತುಂಬಾ ಬಡತನದಲ್ಲಿರುವ ಕಾರಣ, ಸಮಾಜದ ಆರ್ಥಿಕ ಸಹಾಯ ಕೇಳಿದ್ದರು. ಇದಕ್ಕೆ ಸ್ಪಂದನೆ ನೀಡಿದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗ ಹಾಗೂ ಪುತ್ತೂರು ತಾಲೂಕು ಕುಂಬ್ರ ವಲಯದ ಮಜ್ಜಾರಡ್ಕ ಘಟಕವು ರೂಪಾಯಿ 10,100 ಅನ್ನು ಒಟ್ಟು ಮಾಡಿ ನಾಗೇಶ್ ಬೆಳ್ಳಾರೆ ಅವರ ಮನೆಗೆ ತೆರಳಿ ಸಂಘಟನೆಯ ಹರೀಶ್ ಕೋಡಿಯಡ್ಕ ಸಹಾಯಧನದ ಚೆಕ್ ವಿತರಿಸಿದರು.

ಅದೇ ರೀತಿ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ವಸಂತ ತ್ಯಾಗರಾಜನಗರ ಇವರ ಕುಟುಂಬಕ್ಕೆ ಆರ್ಥಿಕವಾಗಿ ಕೈ ಜೋಡಿಸಿದ ಸಂಘಟನೆ ಅವರ ತಂದೆಗೆ ಸಂಘಟನೆಯ ಮಾಜಿ ಅಧ್ಯಕ್ಷ ಜನಾರ್ಧನ್ ಮಜ್ಜಾರ್ ಧನ ಸಹಾಯದ ಚೆಕ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಉದಯ್ ಸ್ವಾಮಿನಗರ, ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ ಮಯೂರ, ಗೌರವ ಸಲಹೆಗಾರ ಸಾಂತಪ್ಪ ಪೂಜಾರಿ ಒಲ್ತಾಜೆ, ಕೋಶಾಧಿಕಾರಿ ಗುರುಪ್ರಸಾದ್ ಮಜ್ಜಾರ್,ಕ್ರೀಡಾ ಕಾರ್ಯದರ್ಶಿ ಗೌತಮ್ ಕೋಡಿಯಡ್ಕ,ಕ್ರೀಡಾ ಜೊತೆ ಕಾರ್ಯದರ್ಶಿ ನವೀನ್ ಮಜ್ಜಾರ್, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಪ್ರತೀಕ್ ಯಾದವ್, ಸದಸ್ಯರಾದ ಹರೀಶ್ ಕೋಡಿಯಡ್ಕ, ಮನೋಹರ್ ಉಪ್ಪಳಿಗೆ, ಸತೀಶ್ ಮಜ್ಜಾರ್,ದೀಪಕ್ ಕೋಡಿಯಡ್ಕ, ಜಗದೀಶ್ ಕೋಡಿಯಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here