ದರ್ಬೆ : ಪ್ರಶಾಂತ್ ಮಹಲ್ 9ನೇ ವರ್ಷಕ್ಕೆ ಪಾದಾರ್ಪಣೆ

0

ಪುತ್ತೂರು: ಸವಣೂರು ಕೆ.ಸೀತಾರಾಮ ರೈಯವರ ಕನಸಿನ ಕೂಸು ಪುತ್ತೂರು ನಗರದ ಪ್ರತಿಷ್ಠಿತ ವಸತಿ ಸಮುಚ್ಚಯ ಪುತ್ತೂರು ದರ್ಬೆಯಲ್ಲಿರುವ ಪ್ರಶಾಂತ್ ಮಹಲ್‌ನ ೯ನೇ ವರ್ಷಕ್ಕೆ ಪಾದಾರ್ಪಣೆಯ ಸಂಭ್ರಮಾಚರಣೆ ಡಿ.27 ರಂದು ನಡೆಯಿತು.

ಬೆಳಿಗ್ಗೆ ದೀಪ ಪ್ರಜ್ವಲನೆ ಮತ್ತು ಶ್ರೀ ಧನಲಕ್ಷ್ಮೀ ಪೂಜೆ ನಡೆಯಿತು. ಸುಳ್ಯ ಕೇಶವಕೃಪಾ ವೇದಪಾಠ ಶಾಲೆಯ ವೇ.ಮೂ. ನಾಗಾರಾಜ ಭಟ್ ಸುಳ್ಯರವರ ನೇತೃತ್ವದಲ್ಲಿ ಶ್ರೀ ಧನಲಕ್ಷ್ಮೀ ಪೂಜೆ ನಡೆಯಿತು. ಸೀತಾರಾಮ ರೈಯವರ ಪತ್ನಿ ಕಸ್ತೂರಿಕಲಾ ಎಸ್.ರೈಯವರು ದೀಪ ಪ್ರಜ್ವಲನೆ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಚಿಕ್ಕಪ್ಪ ನಾಕ್, ಎಸ್.ಬಿ.ಐ ಲೈಫ್‌ನ ಮ್ಯಾನೇಜರ್ ಥೋಮಸ್, ರಾಜೇಶ್ ಪವರ್‌ಪ್ರೆಸ್‌ನ ಮಾಲಕ ರಘುನಾಥ ರಾವ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಪಿ.ಶಿವಾನಂದ, ಆದರ್ಶ ವಿವಿಧೋದ್ದೆಶ ಸಹಕಾರಿ ಸಂಘದ ನಿರ್ದೇಶಕರಾದ ರಾಮಯ್ಯ ರೈ, ವಿ.ವಿ.ನಾರಾಯಣ ಭಟ್, ಮಹಾದೇವ್, ಎ. ಜಗಜೀವನ್‌ದಾಸ್ ರೈ, ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್‌ನ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಕಡಮಜಲು ಸುಭಾಸ್ ರೈ ಸಹಿತ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಅತಿಥಿಗಳನ್ನು ಗೌರವಿಸಿದರು. ಆದರ್ಶ ವಿವಿಧೋದ್ದೆಶ ಸಹಕಾರಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಸಂತ ಜಾಲಾಡಿ ಮತ್ತು ಸಂಸ್ಥೆಯ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ದಶಮಾನೋತ್ಸವಕ್ಕೆ ಹಲವು ಹೊಸ ಯೋಜನೆ:
ಬಾಡಿಗೆ ಸ್ಥಳದಲ್ಲಿದ್ದ ನಾನು ಅದನ್ನು ಕ್ರಯ ಚೀಟಿ ಮಾಡಿದ ಬಳಿಕ ಭವ್ಯ ಸಮುಚ್ಚಯ ನಿರ್ಮಾಣ ಮಾಡಿ ಇವತ್ತಿಗೆ 8 ವರ್ಷ ಪೂರೈಸಿ 9 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೆವೆ. ಪ್ರತಿ ವರ್ಷ ಧನಲಕ್ಷ್ಮೀ ಪೂಜೆ, ಸ್ನೇಹಿತರೊಂದಿಗೆ ಚಾ ಕೂಟ ಮತ್ತು ಭಾಷಣ ಇಲ್ಲದೆ ದೀಪ ಹಚ್ಚುವ ಸಣ್ಣ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದೆವೆ. ಮುಂದೆ 10 ನೇ ವರ್ಷಕ್ಕೆ ದಾಪುಗಾಲಿಡುವ ಸಂದರ್ಭದಲ್ಲಿ ಹೊಸ ಹೊಸ ಯೋಜನೆ ನಮ್ಮ ಮುಂದಿದೆ. ಸಂಪೂರ್ಣ ಹವಾನಿಯಂತ್ರಿತ ಸಭಾಂಗಣ ಸಹಿತ ಗ್ರಾಹಕರಿಗೆ ವಿವಿಧ ಸೌಲಭ್ಯ ನೀಡುವ ಯೋಜನೆ ಹಾಕಿಕೊಂಡದ್ದೆವೆ ಎಂದ ಅವರು ನಮ್ಮ ಹಿತೈಷಿಗಳ, ಗ್ರಾಹಕ ಬಂಧುಗಳ ಸಹಕಾರ ಯಾಚಿಸಿದರು.

ಒಂದೇ ಸೂರಿನಡಿ ಎಲ್ಲಾ ಸೌಕರ್ಯ:
1979 ರಲ್ಲಿ ಸ್ಥಾಪನೆಗೊಂಡಿದ್ದ `ಪ್ರಶಾಂತ್ ಮಹಲ್’ 2011 ರಲ್ಲಿ ನವೀಕರಣಗೊಂಡಿತ್ತು. 2014 ರ ಡಿಸೆಂಬರ್ 27 ರಂದು ಎ.ಜೆ. ಸಮೂಹ ಸಂಸ್ಥೆಗಳ ಛೇರ್‌ಮೆನ್ ಡಾ| ಎ.ಜೆ. ಶೆಟ್ಟಿಯವರು ಪ್ರಶಾಂತ್ ಮಹಲ್ ಅನ್ನು ಉದ್ಘಾಟಿಸಿದರು. `ಪ್ರಶಾಂತ್ ಮಹಲ್` ವಸತಿ ಸಮುಚ್ಚಯವು ಪುತ್ತೂರು ರೈಲು ನಿಲ್ದಾಣಕ್ಕೆ ೩ ಕಿ.ಮೀ. ಮತ್ತು ಪುತ್ತೂರು ಬಸ್ ನಿಲ್ದಾಣಕ್ಕೆ 1 ಕಿ.ಮೀ. ದೂರದಲ್ಲಿದೆ. ತನ್ನ ಸೇವೆ, ಸುಲಭ ಸಂಪರ್ಕ ವ್ಯವಸ್ಥೆಗಳಿಂದಾಗಿ ಜಿಲ್ಲೆಯ ಪ್ರಸಿದ್ಧ ಯಾತ್ರಾ ತಾಣಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ ಮತ್ತು ಕೊಡಗು ಜಿಲ್ಲೆಗಳತ್ತ ತೆರಳುವ ಪ್ರವಾಸಿಗರಿಗೆ ಯಾತ್ರಾರ್ಥಿಗಳ ಅಚ್ಚುಮೆಚ್ಚಿನ ಆಯ್ಕೆಯಾಗಿದೆ. ಸುಸಜ್ಜಿತವಾದ ಎಸಿ ಮತ್ತು ನಾನ್ ಎಸಿ ರೂಮ್‌ಗಳು, ಫ್ಯಾಮಿಲಿ ರೆಸ್ಟೋರೆಂಟ್, ಸಭಾಂಗಣ, ಕಾನ್ಫರೆನ್ಸ್ ಹಾಲ್, ವಾಣಿಜ್ಯ ಮಳಿಗೆಗಳು ಎಲ್ಲವೂ ಒಂದೇ ಸೂರಿನಡಿ ಇದ್ದು ವಿಶಾಲವಾದ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿದೆ.

`ಹೆರಿಟೇಜ್’ ಫ್ಯಾಮಿಲಿ ರೆಸ್ಟೋರೆಂಟ್:
ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್, ತಂದೂರಿ ಕುಸಿನ್ ಜೊತೆಗೆ ವೈವಿಧ್ಯಮಯ ಖಾದ್ಯಗಳ ಜೊತೆಗೆ ಶುಚಿ, ರುಚಿಯಾದ ಆಹಾರ ಖಾದ್ಯಗಳು. ಪೂರ್ವಾಹ್ನ 11.30 ರಿಂದ ರಾತ್ರಿ 10.30 ರವರೆಗೆ ನಗು ಮೊಗದ ಸೇವೆಯ ಜೊತೆಗೆ ನಗರದ 6 ಕಿಮೀ ವ್ಯಾಪ್ತಿಯಲ್ಲಿ ಉಚಿತ ಹೋಮ್ ಡೆಲಿವರಿ ವ್ಯವಸ್ಥೆಯೂ ಲಭ್ಯ. ವಿವಿಧ ಸಮಾರಂಭಗಳಿಗೆ ಶುಚಿ-ರುಚಿಯಾದ ಕ್ಯಾಟರಿಂಗ್ ವ್ಯವಸ್ಥೆಯೂ ಲಭ್ಯವಿದೆ.

`ಸೆನೆಟ್’ ಬ್ಯಾಂಕ್ವೆಟ್ ಹಾಲ್:
ಸಣ್ಣಮಟ್ಟಿನ ಕಾರ್ಯಕ್ರಮಗಳಿಗೆ ಇದು ಪ್ರಶಸ್ತವಾದ ಸಭಾಂಗಣವಾಗಿದ್ದು, 150-200 ಆಸನ ಸಾಮರ್ಥ್ಯವನ್ನು ಹೊಂದಿದೆ. 125 ಜನರಿಗಿಂತ ಮೇಲ್ಪಟ್ಟ ಕ್ಯಾಟರಿಂಗ್ ಬುಕ್ಕಿಂಗ್ ಮೇಲೆ ಹಾಲ್ ಬಾಡಿಗೆಯಿಂದ ವಿನಾಯಿತಿ ಸಿಗಲಿದೆ.

ರೂಮ್ ಸೌಲಭ್ಯ:
ಪ್ರಶಾಂತ್ ಮಹಲ್ ಸಮುಚ್ಚಯದಲ್ಲಿ ಒಟ್ಟು 20 ರೂಮ್‌ಗಳಿವೆ. ಈ ಪೈಕಿ 15 ಎಸಿ ರೂಮ್‌ಗಳಾಗಿದ್ದು, ಡಿಲಕ್ಸ್ ಡಬಲ್ ಬೆಡ್ ಹೊಂದಿರುವ ರೂಮ್‌ಗಳಾಗಿವೆ. ೫ ನಾನ್ ಎಸಿ ರೂಮ್‌ಗಳಾಗಿದ್ದು, ಡಿಲಕ್ಸ್ ಡಬಲ್ ಬೆಡ್ ಹೊಂದಿವೆ. ಟಿವಿ, ಇಂಟರ್‌ನೆಟ್ ಸೌಲಭ್ಯಗಳಿದ್ದು, ಫ್ರೀ ವೈಫೈ ಕೂಡ ಇದ್ದು ಕೈಗೆಟುಕುವ ದರದಲ್ಲಿ ಅತ್ಯುತ್ತಮ ಸೇವೆಯನ್ನು ಒದಗಿಸಲಾಗುತ್ತಿದೆ. ಎಲ್ಲಾ ಮಹಡಿಗಳಿಗೂ ಲಿಫ್ಟ್‌ನ ವ್ಯವಸ್ಥೆಯೂ ಇದೆ.

 

 

LEAVE A REPLY

Please enter your comment!
Please enter your name here