ದಾನಿಗಳ ನಿರೀಕ್ಷೆಯಲ್ಲಿ ಬಡ ಕುಟುಂಬದ ಮಗು ಪುನೀತ್

0

ಪುತ್ತೂರು: ಪುನೀತ್ ಎಂಬ 14 ವರ್ಷದ ಹುಡುಗ ಕೆಮ್ಮಾಯಿ ಕೃಷ್ಣನಗರ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಕಲಿಯುತ್ತಿದ್ದು ಡಿ.27 ರಂದು ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುವ ವೇಳೆ ಕೆಮ್ಮಾಯಿ ಜಂಕ್ಷನ್ ಬಳಿ ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ಕಾಲು ಮತ್ತು ತಲೆಗೆ ತೀವ್ರ ಪೆಟ್ಟಾಗಿದೆ.

ಬಳಿಕ ಮಂಗಳೂರಿನ ಫಸ್ಟ್ ನ್ಯೂರೋ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲು ಮತ್ತು ತಲೆಗೆ ಚಿಕಿತ್ಸೆಗಾಗಿ ಅಂದಾಜು ರೂ. 5  ಲಕ್ಷ ಮೊತ್ತ ಆಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ತೀವ್ರ ಬಡತನದಲ್ಲಿ ಇರುವ ಈ ಕುಟುಂಬ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ ಇದ್ದು ಶೋಚನೀಯ ಸ್ಟಿಯಲ್ಲಿದೆ. ಆದುದರಿಂದ ಸಹೃದಯಿ ದಾನಿಗಳು ಆದಷ್ಟು ಬಡ ಕುಟುಂಬದ ಮಗುವಿನ ಚಿಕಿತ್ಸೆಗೆ ನೆರವು ನೀಡಬಹುದು.

ದಾನಿಗಳು ಪುನೀತ್ S/o. ಮೋನಪ್ಪ, ಪಲಸಡ್ಕ ಮನೆ, ಅಂಚೆ ಮತ್ತು ಗ್ರಾಮ ಚಿಕ್ಕಮುಡ್ನೂರು, ಪುತ್ತೂರು Google pay no : 9964552770 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here