ವಿಶ್ವನಾಥ ಎನ್. ನೇರಳಕಟ್ಟೆರವರ ಕವಿತೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಕವನ ಸಂಕಲನಕ್ಕೆ ಆಯ್ಕೆ

0

ಪುತ್ತೂರು : ವಿಶ್ವನಾಥ ಎನ್. ನೇರಳಕಟ್ಟೆ ಬರೆದ ‘ಸೆಲೂನಿನಲ್ಲಿ ಎಂಕ’ ಕವಿತೆಯು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಕವನ ಸಂಕಲನಕ್ಕೆ ಆಯ್ಕೆಯಾಗಿದೆ.

ಈ ಕವಿತೆಯು ಇದೇ ವರ್ಷದ ಮೇ ತಿಂಗಳಿನಲ್ಲಿ ಪ್ರಜಾವಾಣಿ ಕನ್ನಡದ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಒಂದು ವರ್ಷದ ಅವಧಿಯಲ್ಲಿ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಕವನಗಳಲ್ಲಿ ಉತ್ತಮವೆನಿಸಿದ್ದನ್ನು ಕವನ ಸಂಕಲನಕ್ಕೆ ಆಯ್ಕೆ ಮಾಡುವುದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯನುಸಾರ ವಿಶ್ವನಾಥ ಎನ್ ನೇರಳಕಟ್ಟೆ ಇವರ ಕವನ ಆಯ್ಕೆಯಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿರುವ ವಿಶ್ವನಾಥ ಎನ್. ನೇರಳಕಟ್ಟೆರವರು ಜಿ.ಆರ್. ನರಸಿಂಹನ್ ಹಾಗೂ ಗಾಯತ್ರಿ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here