ನರಿಮೊಗರು ಬಿಂದು ಸಮೂಹ ಸಂಸ್ಥೆಗೆ ಅಟಲ್‌ ಸಾಧನಾ ಪುರಸ್ಕಾರ ಪ್ರದಾನ

0

ಪುತ್ತೂರು: ಆಹಾರ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ಗ್ರಾಮೀಣ ಭಾಗದಲ್ಲಿ ಉತ್ತಮ ಸಾಧನೆಗೆ ಕೇಂದ್ರ ಸರಕಾರ ನೀಡುವ 2022ನೇ ಸಾಲಿನ ಅಟಲ್ ಸಾಧನಾ ಪುರಸ್ಕಾರವನ್ನು ನರಿಮೊಗರು ಬಿಂದು ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸತ್ಯ ಶಂಕರ್ ರವರಿಗೆ ನೀಡಿ ಗೌರವಿಸಿದೆ.


ಗ್ರಾಮೀಣ ಭಾಗದಲ್ಲಿ ಆಹಾರ ಉತ್ಪನ್ನಗಳ ತಯಾರಿಕಾ ಘಟಕ ವಿಭಾಗದಲ್ಲಿ ಉದ್ಯೋಗ ಅವಕಾಶ ಹಾಗೂ ಗ್ರಾಮೀಣ ಭಾಗದಲ್ಲಿ ಆರ್ಥಿಕ ಸಂಚಲನಕ್ಕಾಗಿ ಕೇಂದ್ರ ಸರಕಾರ ಅಟಲ್ ಸಾಧನಾ ಪುರಸ್ಕಾರ ನೀಡಿ ಗೌರವಿಸಿದೆ.

ಕೇಂದ್ರದ ಮಾಜಿ ಸಚಿವರು, ಬಿಜೆಪಿಯ ಅಧಿಕೃತ ವಕ್ತಾರರಾಗಿರುವ ಶಾನವಾಜ್ ಹುಸೇನ್ ಹಾಗೂ ಕೇಂದ್ರ ಉಕ್ಕು ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಪ್ರಶಸ್ತಿ ಪ್ರದಾನ ಮಾಡಿದರು. ಬಿಂದು ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸತ್ಯಶಂಕರ್ ಹಾಗೂ ರಂಜಿತಾ ಶಂಕರ್ ಪ್ರಶಸ್ತಿ ಸ್ವೀಕರಿಸಿದರು.

ನರಿಮೊಗರಿನಲ್ಲಿರುವ ಎಸ್.ಜಿ ಸಮೂಹ ಸಂಸ್ಥೆ ಗ್ರಾಮ ಮಟ್ಟದಲ್ಲಿ ಆರಂಭಗೊಂಡು ಇಂದು 750 ಕೋಟಿ ರೂ. ವಾರ್ಷಿಕ ವ್ಯವಹಾರ ಮಾಡುತ್ತಿದೆ. 2025ರ ವೇಳೆಗೆ 1,000 ಕೋಟಿ ರೂ. ವ್ಯವಹಾರದ ಗುರಿ ಹಾಕಿಕೊಂಡಿದೆ.

ಸಂಸ್ಥೆಯು 40ಕ್ಕೂ ಅಧಿಕ ಉತ್ಪನ್ನಗಳನ್ನು ತಯಾರಿಸುತ್ತಿದೆ. ಬಿಂದು ಪ್ಯಾಕೇಜ್ ಡ್ರಿಂಕಿಂಗ್ ವಾಟರ್‍, ಬಿಂದು ಜೀರಾ ಫಿಜ್, ಬಿಂದು ಲೆಮೆನ್, ಸಿಪ್ ಅನ್ ಮ್ಯಾಂಗೊ, ಮ್ಯಾಂಗೋ ಮಿಲ್ಸ್‌ ಶೇಕ್, ಲೆಮೆನ್ ವಿದ್ ಮಿಂಟ್, ಆಪಲ್, ಪೇರಳೆ, ಲಿಚ್ಚಿ, ದಾಳಿಂಬೆ, ಪುನರ್ಪುಳಿ, ಸ್ಟ್ರಾಬೆರಿ, ಪ್ರೋಝನ್ ಬ್ರಾಂಡ್‌ನಲ್ಲಿ ಗ್ರೀನ್ ಆಪಲ್, ಆರೇಂಜ್, ಆಪಲ್, ಶುಂಠಿ, ಸ್ಟ್ರಾಬೆರಿ, ಝಿವೊ ಬ್ರಾಂಡ್‌ನಲ್ಲಿ ಸೋಡಾ, ಕೋಲಾ, ಸ್ನ್ಯಾಕ್ ಅಪ್‌ನಲ್ಲಿ 15 ಬಗೆಯ ತಿಂಡಿಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ.

LEAVE A REPLY

Please enter your comment!
Please enter your name here