ಕುರಿಯ: ಕೃಷಿ ಜಾಗಕ್ಕೆ ಅಕ್ರಮ ಪ್ರವೇಶಿಸಿ ಹಲ್ಲೆ ಆರೋಪ – ಮಹಿಳೆ ಆಸ್ಪತ್ರೆಗೆ ದಾಖಲು

0

ಪುತ್ತೂರು: ಕೃಷಿ ಜಾಗಕ್ಕೆ ನನ್ನ ಸಹೋದರ ಅಕ್ರಮ ಪ್ರವೇಶಿಸಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುರಿಯ ಗ್ರಾಮದ ಡಿಂಬ್ರಿ ನಿವಾಸಿ ಶಂಕರ್ ಭಂಡಾರಿ ಅವರ ಪತ್ನಿ ಆಶಾ ಶಂಕರ್ ಭಂಡಾರಿ(54 ವ)ವರು ಗಾಯಗೊಂಡವರು. ಕುರಿಯದಲ್ಲಿರುವ ನನ್ನ ಕೃಷಿ ಜಾಗದಲ್ಲಿ ಡಿ.27 ರಂದು ನನ್ನ ಸಹೋದರ ಅರುಣ್ ಕುಮಾರ್ ರೈ ಮತ್ತು ಕೆಲಸಗಾರರಾದ ವಿನಯ ಮತ್ತು ಸುಂದರರವರು ಅಕ್ರಮವಾಗಿ ತಂತಿ ಬೇಲಿ ಕಂಬ ಹಾಕುತ್ತಿದ್ದು, ಈ ಕುರಿತು ಪ್ರಶ್ನಿಸಿದಾಗ ನನಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂಧಿಸಿ, ಮಾನಭಂಗಕ್ಕೆ ಯತ್ನಿಸಿದ್ದಾರಲ್ಲದೆ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಲ್ಲೆಗೊಳಗಾದ ಆಶಾ ಶಂಕರ್ ಭಂಡಾರಿ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here