ಪುಣಚ ಶ್ರೀದೇವಿ ಶಿಶುಮಂದಿರದ ಕಟ್ಟಡಕ್ಕೆ ಶಿಲಾನ್ಯಾಸ

0

ಪುಣಚ: ಪುಣಚ ದೇವಿನಗರ ಶ್ರೀದೇವಿ ಶಿಶುಮಂದಿರದ ನೂತನ ಕಟ್ಟಡದ ಶಿಲಾನ್ಯಾಸ ನಡೆಯಿತು. ಉದ್ಯಮಿ ವಾಮನ ಪೈ ಶಿಲಾನ್ಯಾಸ ನೆರವೇರಿಸಿದರು. ಪುಣಚ ಶ್ರೀಮಹಿಷಮರ್ಧಿನಿ ದೇವಸ್ಥಾನದ ಅರ್ಚಕ ಕೃಷ್ಣ ಬನ್ನಿಂತಾಯರು ಭೂಮಿ ಪೂಜೆ ನಡೆಸಿದರು.

ಕ್ಯಾಂಪ್ಕೋ ದೆಹಲಿಯ ರಾಜೇಶ್ ಪಿ.ವಿ.ಆರ್, ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಬಿ, ಶ್ರೀಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ರಂಗಮೂರ್ತಿ ಎಸ್.ಆರ್, ಆಡಳಿತ ಸಮಿತಿಯ ಸಹಸಂಚಾಲಕಿ ಗಂಗಮ್ಮ, ಸದಸ್ಯರಾದ ನಾರಾಯಣ ಭಟ್ ಕುಪ್ಲುಚಾರು, ಶ್ರೀರಾಮಚಂದ್ರ ಭಟ್ ಕೆ., ರವಿ ಬಿ.ಕೆ, ನಿವೃತ್ತ ಶಿಕ್ಷಕ ಪುರುಷೋತ್ತಮ ಗೌಡ, ಜಗದೀಶ ಮಾರಮಜಲು, ವಿಶ್ವನಾಥ ರೈ ಪರಿಯಾಲು, ಜಯರಾಮ ಕಾನ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಲೋಕೇಶ್ ನಾಯ್ಕ, ಪ್ರೌಢಶಾಲೆಯ ಸಹಶಿಕ್ಷಕ ವಿನೋದ್ ಶೆಟ್ಟಿ, ಶಿಶು ಮಂದಿರದ ಪುಟಾಣಿಗಳು, ಮಾತಾಜಿಯವರು, ಶಿಶುಮಂದಿರದ ಪುಟಾಣಿಗಳ ಹೆತ್ತವರು/ಪೋಷಕರು ಉಪಸ್ಥಿತರಿದ್ದರು. ಶಿಶುಮಂದಿರದ ಕಟ್ಟಡ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಶಾಸ್ತ್ರಿ ಸಿ. ಮಣಿಲ ಸ್ವಾಗತಿಸಿ, ಪ್ರವೀಣ ಪ್ರಭು ದೇವಿನಗರ ವಂದಿಸಿದರು. ವಿನಯ ನಟ್ಟಿ ಸಹಕರಿಸಿದರು.

LEAVE A REPLY

Please enter your comment!
Please enter your name here