ಕಬಕ ಅಡ್ಯಾರಗೋಳಿಯಲ್ಲಿ ದೈವಗಳ ನೇಮೋತ್ಸವ ಸಂಪನ್ನ

0

ಪುತ್ತೂರು :ಕಬಕದ ಅಡ್ಯಾರಗೋಳಿಯಲ್ಲಿ ದ.28 ಮತ್ತು 29ರಂದು ಅಡ್ಯಲಾಯ ಮತ್ತು ಪರಿವಾರದೈವಗಳ ನೇಮೋತ್ಸವ ನಡೆಯಿತು.

ದ.27ರಂದು ಊರ ಹತ್ತು ಸಮಸ್ತರಿಂದ ಕಬಕ ಶ್ರೀಮಹಾದೇವೀ ದೇವಸ್ಥಾನದಿಂದ ದೈವಸ್ಥಾನದವರೆಗೆ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಸಿ ಸಮರ್ಪಣೆ ಮಾಡಲಾಯಿತು. ದ.28ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಮಹಾಗಣಪತಿ ಹವನ, ಶುದ್ಧಿ ಕಲಶ, ನಾಗದೇವರಿಗೆ ಮತ್ತು ದೈವಗಳಿಗೆ ತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ಸಂಜೆ ನಾಗದರ್ಶನ, ಬಳಿಕ ದೈವಗಳ ಭಂಡಾರ ತೆಗೆದು ಮಹಾದೇವೀ ದೇವಸ್ಥಾನಕ್ಕೆ ಭಂಡಾರದ ಮೆರವಣಿಗೆ, ಸುಡುಮದ್ದು ಪ್ರದರ್ಶನ, ಮಹಾ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀಅಡ್ಯಲಾಯ ವೈದ್ಯನಾಥ, ಶ್ರೀಅಣ್ಣಪ್ಪ ಪಂಜುರ್ಲಿ, ಶ್ರೀವ್ಯಾಘ್ರ ಚಾಮುಂಡಿ ದೈವಗಳಿಗೆ ನೇಮ ನಡೆಯಿತು. ದ.29ರಂದು ಬೆಳಿಗ್ಗೆ ಶ್ರೀಧೂಮಾವತಿ ದೈವದ ನೇಮೋತ್ಸವ ನಡೆಯಿತು. ನಂತರ ದೈವಸ್ಥಾನದಲ್ಲಿ ಭಂಡಾರವಿರಿಸಿ ತಂಬಿಲ ಸೇವೆ ನಡೆದು ನೇಮೋತ್ಸವ ಸಂಪನ್ನಗೊಂಡಿತು. ವೇದಮೂರ್ತಿ ಮಿತ್ತೂರು ಸದಾಶಿವ ಭಟ್ ಮತ್ತು ಶ್ರೀಧರ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಉತ್ಸವ ಸಮಿತಿ ಗೌರವಾಧ್ಯಕ್ಷ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಅಡ್ಯಲಾಯ ಸೇವಾಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ ಭಟ್ ಕೊಳಚಪ್ಪೆ, ಅಜಿತ್ ಕುಮಾರ್ ಜೈನ್ ಕಲ್ಲೇಗ, ಅಧ್ಯಕ್ಷ ಸತೀಶ್ ರೈ ಡಿಂಬ್ರಿ ಗುತ್ತು, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಕಲ್ಲಂದಡ್ಕ, ಕೋಶಾಧಿಕಾರಿ ರಮೇಶ್ ಆಚಾರ್ಯ ಕೆದಿಮಾರ್, ಉಪಾಧ್ಯಕ್ಷರುಗಳಾದ ವಿಶ್ವನಾಥ ಭಟ್ ವಡ್ಯ, ವಿ. ಚಂದ್ರಶೇಖರ ನಾಯ್ಕ್, ಗೋಪಾಲ ಕೃಷ್ಣ ರೈ ಪುತ್ತೂರು ಟಯರ್ಸ್ ಕಬಕ, ಜಿನ್ನಪ್ಪ ಪೂಜಾರಿ ಮುರ, ಜೊತೆ ಕಾರ್ಯದರ್ಶಿಗಳಾದ ರವಿ ಮುಂಗ್ಲಿಮನೆ, ರವೀಂದ್ರನಾಥ ಮೇಲಾ೦ಟ ಕಲ್ಲಂದಡ್ಕ, ಸದಸ್ಯರುಗಳಾದ ದಿನೇಶ್ ಶ್ರೀ ಶಾಂತಿ, ಕೃಷ್ಣಪ್ಪ ಗೌಡ ಅಡ್ಯಾಲು, ಜನಾರ್ಧನ ಪ್ರಕಾಶ್ ವಡ್ಯ, ರವೀಂದ್ರ ಪೋಳ್ಯ, ಅರವಿಂದ ಭಗವಾನ್ ರೈ, ಮಹಾದೇವೀ ಧರ್ಮ ಸೇವಾ ವಿಶ್ವಸ್ಥ ಮಂಡಳಿ, ಮಹಾದೇವೀ ಯುವಕ ಮಂಡಲ ಹಾಗೂ ಮಹಿಳಾ ಮಂಡಳಿ, ಮಹಿಳಾ ಭಜನಾ ಮಂಡಳಿ, ಸಹಾಯ ಸಂಜೀವಿನಿ ವಾಟ್ಸಾಪ್ ಗ್ರೂಪ್, ಅಯ್ಯಪ್ಪ ಭಕ್ತ ವೃಂದ, ವೀರಾಂಜನೇಯ ಫ್ರೆಂಡ್ಸ್ ಪದೆಂಜಾರ್, ಚಾಮುಂಡೇಶ್ವರಿ ಯುವ ಬಳಗ ವಿದ್ಯಾಪುರ, ನಾಗ ಮತ್ತು ಪಂಚ ದೈವಗಳ ಸೇವಾಸಮಿತಿ ವಿದ್ಯಾಪುರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಬಕ ಕುಳ, ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಕ್ತರು ಭಾಗಿಯಾಗಿದ್ದರು.

ದೂಮಾವತಿ

ನೇಮೋತ್ಸವ ಸಂದರ್ಭದಲ್ಲಿ ಅಡ್ಯಲಾಯ ಸೇವಾ ಸಮಿತಿ ವತಿಯಿಂದ ಪಾಕ ಶಾಲೆಗೆ ಸುಮಾರು ಒಂದು ಲಕ್ಷ ಮೌಲ್ಯದ ಅಡುಗೆ ಪಾತ್ರೆ ನೀಡಲಾಯಿತು. ದೈವದ ಆಯುಧ ಹಾಗೂ ಮೊಗಗಳಿಗೆ ಸುಮಾರು 1.5 ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಳ್ಳಿಯ ಹೊದಿಕೆ ಹಾಕಿ ಸಮರ್ಪಿಸಲಾಯಿತು.

LEAVE A REPLY

Please enter your comment!
Please enter your name here