ಹರಿಯಾಣದ ಖ್ಯಾತ ಸೈಕ್ಲಿಸ್ಟ್‌ ರಾಣಾ ಮಂಗಳೂರಿನಲ್ಲಿ

0

ಹರಿಯಾಣದ ಸೈಕ್ಲಿಸ್ಟ್‌ 64 ವರ್ಷ ಪ್ರಾಯದ ಕಮಲೇಶ್‌ ರಾಣಾ ಸೈಕಲ್‌ ಮೂಲಕ ದೇಶ ಸಂಚಾರಕ್ಕೆ ಹೊರಟಿದ್ದು ಈಗ ಮಂಗಳೂರು ತಲುಪಿದ್ದಾರೆ. ಡಿ.29 ರಂದು ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ರಾಣಾ ಶ್ರೀನಗರದಿಂದ ಕನ್ಯಾಕುಮಾರಿ ವರೆಗೆ ಸೈಕಲ್‌ ಜಾಥಾ ಹೊರಟಿದ್ದೇನೆ. ಸೈಕಲ್‌ ಬಳಕೆ ನಿರಂತರ ವ್ಯಾಯಾಮ ಯೋಗ ಮಾಡುವುದರಿಂದ ಮಧುಮೇಹವನ್ನು ದೂರವಿಡಬಹುದು. ಸ್ವತಃ ನಾನು ಮಧುಮೇಹದಿಂದ ಬಳಲುತ್ತಿದ್ದೆ. ಸೈಕಲ್‌ ತುಳಿಯಲು ಆರಂಭ ಮಾಡಿದ ಮೇಲೆ ಅದರಿಂದ ಮುಕ್ತಳಾದೆ. ಇದನ್ನು ದೇಶನ ಜನತೆಯೊಂದಿಗೆ ಹಂಚಿಕೊಳ್ಳುವ ಇರಾದೆ ನನ್ನದು ಎಂದರು. ಮಂಗಳೂರಿಗೆ ಆಗಮಿಸಿದ ವೇಳೆ ನಡೆದ ಅಪಘಾತದಲ್ಲಿ ಕೈಗೆ ಗಾಯವಾಗಿದೆ. ಆದರೂ ನನ್ನ ಗುರಿಯಿಂದ ವಿಮುಖಳಾಗಲಾರೆ. ಪತ್ರಕರ್ತ ನಂದಗೋಪಾಲ್‌ ದಂಪತಿಗಳ ಆತಿಥ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದು ಮತ್ತೆ ನನ್ನು ಪ್ರಯಾಣ ಮುಂದುವರಿಯಲಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here