ಪರವೂರಿನಲ್ಲಿರುವ ಪುತ್ತೂರಿನವರಿಂದ ದೇವಳದ ಗೋ ಶಾಲಾ ಹಸುವಿನ ದತ್ತು ಸ್ವೀಕಾರ

0

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋ ಶಾಲೆಯಲ್ಲಿರುವ ಹಸುಗಳಿಗೆ ಆಹಾರ ನೀಡುವ ಕುರಿತು ದತ್ತು ಸ್ವೀಕಾರ ಕಾರ್ಯಕ್ರಮ ಯೋಜನೆಯು ಯಶಸ್ವಿಯಾಗಿ ನಡೆಯುತ್ತಿದ್ದು, ಪರವೂರಿನಲ್ಲಿರುವ ಪುತ್ತೂರಿನವರೂ ಕೂಡಾ ಹಸುವನ್ನು ದತ್ತು ಸ್ವೀಕಾರ ಮಾಡಿದ್ದಾರೆ.

ಪುತ್ತೂರಿನವರಾಗಿ ಮೈಸೂರಿನಲ್ಲಿ ಉದ್ಯಮವನ್ನು ನಡೆಸುತ್ತಿರುವ ಸುಜಿತ್ ರೈರವರು ಅವರ ಪುತ್ರಿ ವೃದ್ಧಿರವರ ಹೆಸರಿನಲ್ಲಿ ದೇವಳದ ಗೋಶಾಲೆಯಲ್ಲಿನ ಕಪಿಲೆ ಹಸುವನ್ನು ದತ್ತು ಸ್ವೀಕಾರ ಮಾಡಿದ್ದು, ಇದರ ಒಂದು ವರ್ಷದ ನಿರ್ವಹಣೆ ಬಾಬ್ತು ರೂ.18ಸಾವಿರವನ್ನು ದೇವಳಕ್ಕೆ ಸಮರ್ಪಣೆ ಮಾಡಿದ್ದಾರೆ ಎಂದು ದೇವಳದಿಂದ ಮಾಹಿತಿ ನೀಡಲಾಗಿದೆ.

LEAVE A REPLY

Please enter your comment!
Please enter your name here