ರಾಮಕೃಷ್ಣ ಪ್ರೌಢಶಾಲೆ ಕೊಂಬೆಟ್ಟಿನಲ್ಲಿ ತ್ರೈಮಾಸಿಕ ಸಭೆ ಹಾಗೂ ಮಕ್ಕಳ ಮಾಸೊತ್ಸವ

0

ಪುತ್ತೂರು ;  ರಾಮಕೃಷ್ಣ ಪ್ರೌಢಶಾಲೆ ಕೊಂಬೆಟ್ಟು ಇಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ತ್ರೈಮಾಸಿಕ ಸಭೆ ಹಾಗೂ ಮಕ್ಕಳ ಮಾಸೊತ್ಸವ ಪ್ರಯುಕ್ತ ಮಕ್ಕಳ ರಕ್ಷಣಾ ನೀತಿ ,ಜಾಗ್ರತಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಆಶಯ ಗೀತೆಯೊಂದಿಗೆ ಸುಮಂಗಲಾ ಶೆಣೈ ಇವರು ಪ್ರಾರಂಭಿಸಿದರು .


ಪ್ರಾಸ್ತಾವಿಕವಾಗಿ ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಅಧ್ಯಕ್ಷ ರಾದ ಹರಿಣಾಕ್ಷಿ ಜೆ ಶೆಟ್ಟಿ  ಮಾತಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಕಸ್ತೂರಿ ಬೊಳುವಾರು ಮಕ್ಕಳ ಜಾಗೃತಿಕಾರ್ಯಕ್ರಮ ನಡೆಸಿಕೊಟ್ಟರು.

 ಅಧ್ಯಕ್ಷತೆ ವಹಿಸಿ  ಮಾತನಾಡಿದ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಇಂತಹ ಜಾಗೃತಿ ಕಾರ್ಯಕ್ರಮಗಳು ಮುಂದಿನ ದಿನದಲ್ಲೂ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವಂತಾಗಲಿ ಎಂದು ಆಶಿಸಿದರು.

ಒಕ್ಕೂಟದ ಅಧ್ಯಕ್ಷ ರಾದ ನಯನಾ ರೈ ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರ ದ ಕೊಶಾಧಿಕಾರಿ ಇಸ್ಮಾಯಿಲ್ ನೆಲ್ಯಾಡಿ ಸದಸ್ಯರಾದ ರೋಹಿಣಿ ರಾಘವ ,ವತ್ಸಲಾ ನಾಯಕ್, ಅಶ್ವಿನಿ,ಪ್ರೇಮಲತಾ,ಶಾಂತ ಕುಂಟಿನಿ ಉಪಸ್ಥಿತರಿದ್ದರು.
ಶಾಲೆಯ ಸಹ ಶಿಕ್ಷಕಿ ಗಾಯತ್ರಿ  ವಂದಿಸಿದರು.

LEAVE A REPLY

Please enter your comment!
Please enter your name here