ನಾಳೆ(ಡಿ.31): ಮಹಾಲಿಂಗೇಶ್ವರ ದೇವಳದ ಧಾರ್ಮಿಕ ಶಿಕ್ಷಣ ಕೇಂದ್ರಗಳ ಸಂಪನ್ಮೂಲ ವ್ಯಕ್ತಿಗಳಿಗೆ, ನಿರ್ವಾಹಕರಿಗೆ ಪ್ರಶಿಕ್ಷಣ, ಸಂವಾದ ಕಾರ್ಯಕ್ರಮ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂದೂ ಧಾರ್ಮಿಕ ಶಿಕ್ಷಣದ ವತಿಯಿಂದ ಧಾರ್ಮಿಕ ಶಿಕ್ಷಣ ಕೇಂದ್ರಗಳ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ನಿರ್ವಾಹಕರಿಗೆ ಪ್ರಶಿಕ್ಷಣ ಹಾಗೂ ಸಂವಾದ ಕಾರ್ಯಕ್ರಮವು ಡಿ.31 ರಂದು ಮಧ್ಯಾಹ್ನ ಗಂಟೆ 1 ರಿಂದ ಸಂಜೆ ಗಂಟೆ 5.30ರ ತನಕ ದೇವಳದ ಸಭಾಭವನದಲ್ಲಿ ಜರುಗಲಿದೆ.

ಹಿರಿಯರಾದ ಕಜಂಪಾಡಿ ಸುಬ್ರಮಣ್ಯ ಭಟ್, ದಾಸಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಹಾಗೂ ಸಂಸ್ಕೃತ ವಿದ್ವಾನ್ ಮಂಜಳಗಿರಿ ವೆಂಕಟ್ರಮಣ ಭಟ್ ಅವರು ಹಿಂದೂ ಆಚಾರ ವಿಚಾರ, ಭಜನಾ ಧಾಟಿ/ಏರಿಳಿತ, ಸಂಸ್ಕೃತ ನಿತ್ಯ ಶ್ಲೋಕಗಳ ಉಚ್ಚಾರಣೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರಗಳನ್ನು ಆರಂಭಿಸಲು ಇಚ್ಛೆ ಇರುವ ಸಂಸ್ಕೃತ ಉಪನ್ಯಾಸಕರು ಯಾ ಧರ್ಮ ಅಭಿಮಾನಿಗಳು ಕೂಡಾ ಭಾಗವಹಿಸಲು ಸತೀಶ್ ಭಟ್ ಎಂ ಮೊಬೈಲ್ ಸಂಖ್ಯೆ 9449449843 ಅವರನ್ನು ಸಂಪರ್ಕಿಸುವುದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here