ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ: ಸಂಚಾಲಕ-ದಯಾನಂದ ರೈ, ಸಹಸಂಚಾಲಕ- ಜಯಪ್ರಕಾಶ್ ರೈ ನಾಮನಿರ್ದೇಶಿತ ನಿರ್ದೇಶಕರುಗಳಾಗಿ ಶಶಿಕುಮಾರ್ ರೈ, ನಿತ್ಯಾನಂದ ಶೆಟ್ಟಿ, ರಮೇಶ್ ರೈ

0

ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಂಚಾಲಕರಾಗಿ ದಯಾನಂದ ರೈ ಮನವಳಿಕೆಗುತ್ತು ಹಾಗೂ ಸಹಸಂಚಾಲಕರಾಗಿ ಜಯಪ್ರಕಾಶ್ ರೈ ನೂಜಿಬೈಲುರವರು ಆಯ್ಕೆಯಾಗಿದ್ದಾರೆ.


ಬಂಟರ ಯಾನೆ ನಾಡವರ ಮಾತೃ ಸಂಘಕ್ಕೆ ನಾಮನಿರ್ದೇಶಿತ ನಿರ್ದೆಶಕರುಗಳಾಗಿ ಪುತ್ತೂರಿನಿಂದ ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ರಮೇಶ್ ರೈ ಸಾಂತ್ಯರವರನ್ನು ಆಯೆ ಮಾಡಲಾಯಿತು.
ದ. ೩೧ ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿದ ಸಭೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯತು.

ಸಭೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರುಗಳಾದ ಮಿತ್ರಂಪಾಡಿ ಪುರಂದರ ರೈ, ಸಾಜ ರಾಧಾಕೃಷ್ಣ ಆಳ್ವ, ಜೈರಾಜ್ ಭಂಡಾರಿ ನೊಣಾಲು, ಕುಂಬ್ರ ದುರ್ಗಾಪ್ರಸಾದ್ ರೈ ಹಾಗೂ ವಾಣಿ ಶೆಟ್ಟಿ ನೆಲ್ಯಾಡಿರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here