ನೆಲ್ಯಾಡಿ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ

0

ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನೆಲ್ಯಾಡಿ ಶಾಖೆಯ ವತಿಯಿಂದ ನಬಾರ್ಡ್‌ನ ಸಹಯೋಗದೊಂದಿಗೆ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ ಡಿ.೩೧ರಂದು ನೆಲ್ಯಾಡಿ ಶಾಖಾ ವಠಾರದಲ್ಲಿ ನಡೆಯಿತು.

ಎಸ್‌ಸಿಡಿಸಿಸಿ ಬ್ಯಾಂಕ್‌ನ ವಿಶ್ರಾಂತ ಶಾಖಾ ವ್ಯವಸ್ಥಾಪಕ ಸಿದ್ದಪ್ಪ ನಾಕ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ, ನಿರ್ದೇಶಕ ಜಯಾನಂದ ಬಂಟ್ರಿಯಾಲ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು.

 
ಸಿಬ್ಬಂದಿ ಹರ್ಷಿತ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಲ್ಯಾಡಿ ಶಾಖಾ ವ್ಯವಸ್ಥಾಪಕ ಭಾಸ್ಕರ ಅವರು ಸ್ವಾಗತಿಸಿದರು. ಸಿಬ್ಬಂದಿ ಅರ್ಚನ ವಂದಿಸಿದರು. ನೆಲ್ಯಾಡಿ ಶಾಖೆಯ ಸಹಾಯಕ ಶಾಖಾ ವ್ಯವಸ್ಥಾಪಕಿ ಅನಿತ ನಿರೂಪಿಸಿದರು. ಸಿಬ್ಬಂದಿಗಳಾದ ಶೈನೀಶ್ ಜೆ., ಪದ್ಮಪ್ಪ ಪೂಜಾರಿ, ನವೋದಯ ಪ್ರೇರಕ ಚಂದ್ರಗೌಡ, ಪಿಗ್ಮಿ ಸಂಗ್ರಾಹಕರಾದ ಸುಬ್ರಹ್ಮಣ್ಯ ಭಟ್, ಜನಾರ್ದನ,ಮಮತ ಸಹಕರಿಸಿದರು.

LEAVE A REPLY

Please enter your comment!
Please enter your name here