ಪಾಲಿಂಜೆ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವಕ್ಕೆ ಹೊರೆಕಾಣಿಕೆ

0

ಪುತ್ತೂರು:ಕುರಿಯ ಗ್ರಾಮದ ಅಮ್ಮುಂಜ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವಕ್ಕೆ ಹೊರೆಕಾಣಿಕೆ ಸಮರ್ಪಣೆಯು ಜ.5ರಂದು ಸಂಜೆ ನಡೆಯಿತು.


ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಬಳಿಯಿಂದ ಹೊರಟ ಹೊರೆಕಾಣಿಕೆ ಮೆರವಣಿಗೆಗೆ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ಮೆರವಣಿಗೆ ಮುಖ್ಯರಸ್ತೆಯ ಮೂಲಕ ಸಾಗಿ ದೇವಸ್ಥಾನದಲ್ಲಿ ಸಮಾಪನಗೊಂಡಿತು. ರಾತ್ರಿ ದೇವಸ್ಥಾನದಲ್ಲಿ ಶ್ರೀದೇವತಾ ಪ್ರಾರ್ಥನೆ ಹಾಗೂ ಉಗ್ರಾಣಪೂಜೆ ನಡೆಯಿತು.

ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಲಕ್ಷ್ಮಣ್ ಬೈಲಾಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ನಾಯ್ಕ, ಸದಸ್ಯರಾದ ಸಂತೋಷ್ ರೈ ಸಂಪ್ಯದಮೂಲೆ, ರೇಖನಾಥ ರೈ ಸಂಪ್ಯದಮೂಲೆ, ರಮೇಶ್ ಅಂಗಿಂತ್ತಾಯ, ವಿಠಲ ಗೌಡ ಪಾಲಿಂಜೆ, ಮಾಲಿನಿ ಹೆಗ್ಡೆ ಪಾಲಿಂಜೆ, ಮಾಜಿ ಅಧ್ಯಕ್ಷ ಜಯರಾಮ ರೈ ನುಳಿಯಾಲು, ಅರ್ಚಕ ಶ್ರವಣ್ ಭಟ್, ಪ್ರಮುಖರಾದ ರಾಜೇಶ್ ರೈ ಸಂಪ್ಯ, ವಿಶ್ವಜಿತ್ ಅಮ್ಮುಂಜೆ, ವಿಶ್ವನಾಥ ನಾಯ್ಕ ಪಾಲಿಂಜೆ, ಉದಯ ಭಟ್, ದಿನೇಶ್ ಗೌಡ ಡೆಮ್ಮಲೆ, ರಾಮಣ್ಣ ನಾಯ್ಕ, ಸತೀಶ್ ಅಮ್ಮುಂಜೆ, ಮೋಹನ ಪಾಟಾಳಿ, ರಿತೇಶ್ ಡೆಮ್ಮಲೆ, ವಿನೀತ್, ಬ್ರಿಜೇಶ್, ಅದಿತ್ ಪಾಲಿಂಜೆ, ಪೂರ್ಣಿಮಾ ಅಮ್ಮುಂಜೆ, ರೇವತಿ ಅಮ್ಮುಂಜೆ, ಯಶೋಧ ಅಮ್ಮುಂಜೆ, ತನಿಯಪ್ಪ ಸಂಪ್ಯದಮೂಲೆ, ಜಯಶಂಕರ ರೈ ಸಂಪ್ಯದಮೂಲೆ, ಜಗನ್ನಾಥ ಶೆಟ್ಟಿ ಸಂಪ್ಯದಮೂಲೆ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

ಇಂದು ದರ್ಶನ ಬಲಿ:

ಜಾತ್ರೋತ್ಸವದಲ್ಲಿ ಜ.೬ರಂದು ಅರ್ಧ ಏಕಾಹ ಭಜನೆ ನಡೆಯಲಿದ್ದು ಬೆಳಿಗ್ಗೆ ೬ ಗಂಟೆಗೆ ಭಜನೆ ಪ್ರಾರಂಭಗೊಳ್ಳಲಿದೆ. ನಂತರ ಬೆಳಿಗ್ಗೆ ಗಣಹೋಮ, ನಾಗಸನ್ನಿಧಿಯಲ್ಲಿ ಆಶ್ಲೇಷ ಬಲಿ, ನಾಗತಂಬಿಲ, ಮಹಾವಿಷ್ಣುಮೂರ್ತಿ ದೇವರಿಗೆ ಪವಮಾನಾಭಿಷೇಕ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬ ಗಂಟೆಯಿಂದ ಶ್ರೀದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಚಾಮುಂಡೇಶ್ವರಿ ದೇವಸ್ಥಾನದ ತನಕ ದೇವರ ಪೇಟೆ ಸವಾರಿ, ನಂತರ ದೇವಸ್ಥಾನಕ್ಕೆ ಹಿಂತಿರುಗಿ ದೇವರಿಗೆ ಕಲಶಾಭಿಷೇಕ, ಸಂಪ್ರೋಕ್ಷಣೆ, ವೈದಿಕ ಮಂತ್ರಾಕ್ಷತೆ, ತೀರ್ಥಪ್ರಸಾದ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here