ಕರ್ಕುಂಜ ಬಾರಿಕೆ ಕುಟುಂಬದ ತರವಾಡ ಮನೆಯಲ್ಲಿ ಧರ್ಮ ನೇಮೋತ್ಸವ

0

ಪುತ್ತೂರು: ಕರ್ಕುಂಜ ಬಾರಿಕೆ ಕುಟುಂಬದ ತರವಾಡು ಮನೆಯಲ್ಲಿ ಧರ್ಮ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ಜ.೪ರ ಹಾಗೂ ೫ ರಂದು ನಡೆಯಿತು.

ಜ.೪ರಂದು ಬೆಳಿಗ್ಗೆ ಗಣಪತಿ ಹೋಮ, ಸ್ಥಳ ಶುದ್ಧಿ, ವೆಂಕಟ್ರಮಣ ದೇವರ ಸೇವೆ, ನಾಗತಂಬಿಲ, ಸಂಜೆ ದೈವಗಳ ಭಂಡಾರ ತೆಗೆದು ಹುಲಿಭೂತ(ಪಿಲಿ ಚಾಮುಂಡಿ), ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ದೈವಗಳ ನೇಮ ನಡೆಯಿತು.


ಜ.೫ರಂದು ಕುಟುಂಬದ ಧರ್ಮ ದೈವ ರುದ್ರಚಾಮುಂಡಿ(ರುದ್ರಾಂಡಿ), ಗುಳಿಗ ಹಾಗೂ ಕಲ್ಲುರ್ಟಿ ದೈವಗಳ ನೇಮ ನಡೆಯಿತು. ತರವಾಡು ಮನೆ ಕುಟುಂಬಸ್ಥರು ಹಾಗೂ ಬಂಧು ಮಿತ್ರರು ನೇಮೋತ್ಸವದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here