’ಸ್ಪೂರ್ತಿಶ್ರೀ’ ಪ್ರಶಸ್ತಿಗೆ ಸೇರ ಕೋಟಿಯಪ್ಪ ಪೂಜಾರಿ ಆಯ್ಕೆ ; ಫೆ.11ರಂದು ಪ್ರಶಸ್ತಿ ಪ್ರದಾನ

0

ಪುತ್ತೂರು: ಬನ್ನೂರು ಸ್ಪೂರ್ತಿ ಯುವಕ-ಯುವತಿ ಮಂಡಲ ಮಹಿಳಾ ಮಂಡಲ ಇವರು ಪ್ರತಿ ವರ್ಷ ನೀಡುತ್ತಿರುವ “ಸ್ಪೂರ್ತಿಶ್ರೀ” ಪ್ರಶಸ್ತಿ ಪುರಸ್ಕಾರಕ್ಕೆ 2022-23ನೇ ಸಾಲಿನಲ್ಲಿ ಸೇರ ಕೋಟಿಯಪ್ಪ ಪೂಜಾರಿಯವರು ಆಯ್ಕೆಯಾಗಿರುತ್ತಾರೆ.

ಶೈಕ್ಷಣಿಕ, ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಇವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2023 ಫೆ.11ರಂದು ನಡೆಯುವ ಬನ್ನೂರು ಸ್ಪೂರ್ತಿ ಯುವಕ-ಯುವತಿ ಮಂಡಲ ಮಹಿಳಾ ಮಂಡಲದ 33ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸಂಘಟಕರು ತಿಳಿಸಿರುತ್ತಾರೆ. ಪ್ರತಿ ವರ್ಷ ಒಬ್ಬರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಡಾ| ಎಸ್. ರಾಧಾಕೃಷ್ಣನ್ ರಾಜ್ಯ ಶಿಕ್ಷಕ ಪ್ರಶಸ್ತಿ, ಸಮಾಜರತ್ನ ರಾಷ್ಟ್ರೀಯ ಪುರಸ್ಕಾರ, ರಾಜ್ಯ ಮಟ್ಟದ ಗ್ರಾಹಕ ಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಕೋಟಿಯಪ್ಪ ಪೂಜಾರಿಯವರು ಲೇಖಕ, ಕವನಗಾರ, ಉತ್ತಮ ಬರಹಗಾರ ಮತ್ತು ಸಂಘಟಕರಾಗಿದ್ದಾರೆ.

LEAVE A REPLY

Please enter your comment!
Please enter your name here