ಜಿಲ್ಲಾ ಮಟ್ಟದ  ಸೀನಿಯರ್ ವಿಭಾಗದ ಸಮೂಹ ಗೀತಾ ಗಾಯನ ಸ್ಪರ್ಧೆಯಲ್ಲಿ ಗುರುಪ್ರಿಯ ಕಾಮತ್ ಮತ್ತು ಬಳಗಕ್ಕೆ  ಪ್ರಥಮ ಬಹುಮಾನ

0

ಪುತ್ತೂರು: ಸಾಧನಾ ಬಳಗ  ಮಂಗಳೂರು ಇವರು ಮಂಗಳೂರಿನ ಡೊಂಗರಕೇರಿ ಕೆನರಾ ಶಾಲೆಯಲ್ಲಿ  ಆಯೋಜಿಸಿದ ಜಿಲ್ಲಾ ಮಟ್ಟದ  ಸೀನಿಯರ್ ವಿಭಾಗದ ಸಮೂಹ ಗೀತಾ ಗಾಯನ ಸ್ಪರ್ಧೆಯಲ್ಲಿ ಗುರುಪ್ರಿಯ ಕಾಮತ್ ಮತ್ತು ಬಳಗ ಪ್ರಥಮ ಸ್ಥಾನ ಪಡೆದು 8 ಸಾವಿರ ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಸಮೂಹ‌ನೃತ್ಯ ಸ್ಪರ್ಧೆಯಲ್ಲಿ ಪ್ರಖ್ಯಾತಿ ಯುವತಿ ಮಂಡಲದ ಸದಸ್ಯರು ನಾಲ್ಕನೇ ಸ್ಥಾನ‌ ಪಡೆದು 3 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಪಡೆದುಕೊಂಡಿರುತ್ತಾರೆ.  ಗುರುಪ್ರಿಯ ಕಾಮತ್, ಸಮೃದ್ದಿ ಶೆಣೈ, ದಿವ್ಯ ಅಮ್ಮುಂಜೆ, ದೀಪ್ತಿ ಬಲ್ನಾಡ್, ಪ್ರೀತಿ ಕೂಡುರಸ್ತೆ,ವಿದ್ಯಾ ನಾಯಕ್, ಕುಷಿತಾ ನರಿಮೊಗರು, ಶ್ರಾವ್ಯ ಬಜಪ್ಪಾಳ,  ಮೇಘ ದೇವಿಪ್ರಸಾದ್, ನವ್ಯಶ್ರೀ ಪುತ್ತೂರು, ಜ್ಞಾನ ರೈ ಕುರಿಯ, ವತ್ಸಲಾ ನಾಯಕ್  , ಶೋಭಾ ನಾಯಕ್, ಪ್ರೇಮ ಪೈ, ದೀಕ್ಷಾ ಕಾಮತ್, ಗಾಯನ‌ ಮತ್ತು ನೃತ್ಯದಲ್ಲಿ- ಶಿವಾನಂದ ಶೆಣೈ ಮತ್ತು ನರಸಿಂಹ ಭಟ್ ಪುತ್ತೂರು ಪಕ್ಕವಾದ್ಯದಲ್ಲಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here