ಬಜರಂಗದಳ ಸಂಚಾಲಕನ ಮೇಲೆ ಹಲ್ಲೆ ಯತ್ನ- ಮೂವರು ಆರೋಪಿಗಳು ವಶಕ್ಕೆ

0

ಶಿವಮೊಗ್ಗ : ಮಲೆನಾಡಿನಲ್ಲಿ ಮತ್ತೆ ಶಾಂತಿ ಕದಡುವ ಯತ್ನ ಮುಂದುವರಿದಿದ್ದು ಬಜರಂಗದಳದ ಕಾರ್ಯಕರ್ತನೊಬ್ಬನ ಮೇಲೆ ದುಷ್ಕರ್ಮಿಯೊಬ್ಬ ಮಚ್ಚಿನಿಂದ ದಾಳಿ ಮಾಡಲು ಯತ್ನಿಸಿದ್ದಾನೆ. ಕೂದಲೆಳೆ ಅಂತರದಿಂದ ಭಜರಂಗಿ ಸುನಿಲ್ ಪಾರಾಗಿದ್ದಾನೆ. ಸಾಗರದಲ್ಲಿ ಈ ಘಟನೆ ಸಂಭವಿಸಿದ್ದು ಅರೋಪಿಯನ್ನು ಸಮೀರ್ ಎಂದು ಗುರುತಿಸಲಾಗಿದೆ. ಇಬ್ಬರೂ ಸಾಗರದ ನೆಹರೂ ನಗರ ನಿವಾಸಿಗಳಾಗಿದ್ದು ಹಿಜಾಬ್ ವಿಷಯದಲ್ಲಿ ವೈಷಮ್ಯ ಬೆಳೆದಿದೆ ಎನ್ನಲಾಗಿದೆ.

ಈ ಮಧ್ಯೆ ಹಲ್ಲೆಗೆ ಯತ್ನಿಸಿರುವ ಆರೋಪದಲ್ಲಿ ಮೂವರನ್ನು ಪೊಲೀಶರು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ. ಸಮೀರ್‌, ಇಂತ್ಯಾಜ್‌, ಮನ್ಸೂರ್‌ ಬಂಧಿತರು. ಹಲ್ಲೆಯ ಮುಖ್ಯ ಆರೋಪಿ ಸಮೀರ್‌ ತಂಗಿಯನ್ನು ಸುನೀಲ್‌ ಕಳೆದ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿದ್ದು ಇದೇ ಕಾರಣಕ್ಕೆ ಹಲ್ಲೆಗೆ ಯತ್ನಿಸಿರುವುದಾಗಿ ತನಿಖೆಯ ವೇಳೆ ಆರೋಪಿ ತಿಳಿಸಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here