ಉಪ್ಪಿನಂಗಡಿ ಮಾಂಡೋವಿ ಮೋಟಾರ್ಸ್ ಗೆ ಮಾರುತಿ ಸುಜ್ಹುಕಿ ಲಿಮಿಟೆಡ್ ನ ಪಂಕಜ್ ನಿಗಮ್ ಭೇಟಿ

0

ಕೃಷಿ ಪಂಡಿತ ಮೋನಪ್ಪ ಕರ್ಕೇರರವರಿಗೆ ಸನ್ಮಾನ

ಪುತ್ತೂರು: ಕಾರು ಉತ್ಪಾದನೆಯಲ್ಲಿಯೇ ಅಗ್ರ ಸ್ಥಾನದಲ್ಲಿರುವ ಮಾರುತಿ ಸುಜ್ಹುಕಿ ಲಿಮಿಟೆಡ್ ನ ಗ್ರಾಮೀಣ ವಿಭಾಗದ ಮುಖ್ಯಸ್ಥ ಪಂಕಜ್ ನಿಗಮ್ ಹಾಗೂ ಕರ್ನಾಟಕ ರಾಜ್ಯ ಮುಖ್ಯಸ್ಥ ಆದಿತ್ಯ ಗಂಗ್ವಾರ್ ಇತ್ತೀಚೆಗೆ ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಗೆ ಭೇಟಿ ನೀಡಿದರು.


ಸಂಸ್ಥೆಗೆ ಭೇಟಿ ನೀಡಿದ ಅವರು, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು ಸಂಸ್ಥೆಯ ವ್ಯವಹಾರ, ಸೇವೆ, ಮಾರಾಟ ವಿಭಾಗದ ಸಾಧನೆಯನ್ನು ಕಂಡು ಶ್ಲಾಘಿಸಿದರು.

ಬಳಿಕ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈಯವರೊಂದಿಗೆ ಸಮಾಲೋಚನೆ ನಡೆಸಿದರು. ಮಾಂಡೋವಿ ಮೋಟಾರ್ಸ್ ನ ಗ್ರಾಹಕರು, ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಮೋನಪ್ಪ ಕರ್ಕೇರಾರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

ಮಾಂಡೋವಿ ಮೋಟಾರ್ಸ್ ನ ರೂರಲ್ ಸೇಲ್ಸ್ ಮ್ಯಾನೇಜರ್ ಸುಜಿತ್ ಕುಮಾರ್, ಉಪ್ಪಿನಂಗಡಿ ಶಾಖೆಯ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಹರ್ಷ ರೈ ಕೆ., ಮಾರಾಟ ವಿಭಾಗದ ಹರಿಕಿರಣದ ರೈ ಎಸ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here