ಪುತ್ತಿಲ ಶ್ರೀರಾಮ ಗೆಳೆಯರ ಬಳಗದಿಂದ ಬಡ ಕುಟುಂಬದ ಚಿಕಿತ್ಸೆಗೆ ಧನಸಹಾಯ

0

ಪುತ್ತೂರು: ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿರುವ ನರಿಮೊಗರುವಿನ ಬಡ ಕುಟುಂಬದ ಅಂಗಾರ ಎಂಬವರ ಚಿಕಿತ್ಸಾ ವೆಚ್ಚಕ್ಕಾಗಿ ನರಿಮೊಗರು ಪುತ್ತಿಲ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಧನ ಸಹಾಯ ನೀಡಿದರು.


ಸಂಘದ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಗ್ರಾ.ಪಂ. ಸದಸ್ಯ ಬಾಲಕೃಷ್ಣ ಪೂಜಾರಿ ಕುರೆಮಜಲು, ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಅನಿಲ್ ಕುಮಾರ್ ಕಣ್ಣಾರ್ನೂಜಿ, ಸಂಘದ ಗೌರವ ಸಲಹೆಗಾರ ಸುಂದರ ನಾಯ್ಕ್ ಬಿ.ಕೆ., ಅಧ್ಯಕ್ಷರು ಪುರುಷೋತ್ತಮ್ ಬಿ.ಕೆ., ಸದಸ್ಯರಾದ ಹರೀಶ ಬಿ.ಕೆ., ಪುರಂದರ ನಡುಬೈಲು, ಶ್ರೀಧರ್ ಪುತ್ತಿಲ, ಮೋನಪ್ಪ ಗುತ್ತಿನಪಾಲು, ಅವಿನಾಶ್ ಕೆದಗೆದಡಿ, ರುಕ್ಮಯ ಕೆದಗೆದಡಿ, ವಿನಯ್ ಪುತ್ತಿಲ, ಅಭಿಷೇಕ್ ಕಲ್ಲಮ, ಧನುಷ್ ಬಿ. ಕೆ,ಧನಂಜಯ ಕಲ್ಲಮ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here