ಮೂಲಭೂತ ಸೌಕರ್ಯ ಒದಗಿಸದ ಸರಕಾರ-ಚುನಾವಣೆ ಬಹಿಷ್ಕಾರದ ನಿರ್ಧಾರ

0

ಪುತ್ತೂರು:ನರಿಮೊಗರು ಗ್ರಾಮದ ಮುಕ್ವೆಯ ಓಂಕಾರ ಬಡಾವಣೆಯ ನಿವಾಸಿಗಳು ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸುವ  ನಿರ್ಧಾರ ಮಾಡಿದ್ದು ಈ ಕುರಿತು ಬ್ಯಾನರೊಂದನ್ನು ಅಳವಡಿಸಿದ್ದಾರೆ.

ಕಳೆದ 10 ವರ್ಷದಿಂದ ಓಂಕಾರ ಬಡಾವಣೆಯ ನಿವಾಸಿಗಳಿಗೆ  ರಸ್ತೆ ಡಾಮಾರೀಕರಣ, ನೀರು, ದಾರಿದೀಪ, ಚರಂಡಿ ವ್ಯವಸ್ಥೆಯಂತಹ ಮೂಲಭೂತ ಸೌಕರ್ಯವನ್ನು ಕಲ್ಪಿಸದ ಸ್ಥಳೀಯ ಪಂಚಾಯತ್‌ ಹಾಗೂ ಸರಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದು , ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿ ಬ್ಯಾನರ್‌ ಅಳವಡಿಸಿದ್ದಾರೆ.

LEAVE A REPLY

Please enter your comment!
Please enter your name here