ನೆಲ್ಯಾಡಿ: ರಿಕ್ಷಾಕ್ಕೆ ಆಕಸ್ಮಿಕ ಬೆಂಕಿ

0

ನೆಲ್ಯಾಡಿ: ರಿಕ್ಷಾವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸೀಟ್, ಬ್ಯಾಟರಿ ಸುಟ್ಟು ಹೋದ ಘಟನೆ ಜ.28ರಂದು ಬೆಳಿಗ್ಗೆ ನೆಲ್ಯಾಡಿಯಲ್ಲಿ ನಡೆದಿದೆ.


ನೆಲ್ಯಾಡಿ ಪಟ್ಟೆಜಾಲು ನಿವಾಸಿ ಬಾಲಕೃಷ್ಣ ಶೆಟ್ಟಿ ಅವರು ಜ.27ರಂದು ರಾತ್ರಿ ಮನೆ ಶೆಡ್‌ನಲ್ಲಿ ನಿಲ್ಲಿಸಿದ್ದ ರಿಕ್ಷಾವನ್ನು ಜ.28ರಂದು ಬೆಳಿಗ್ಗೆ ನೆಲ್ಯಾಡಿಗೆ ಬರಲೆಂದು ಚಾಲೂ ಮಾಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ರಿಕ್ಷಾದ ಹಿಂಬದಿಯ ಸೀಟು, ಬ್ಯಾಟರಿ ಸುಟ್ಟುಹೋಗಿದೆ. ತಕ್ಷಣ ಜಾಗರೂಕರಾದ ಬಾಲಕೃಷ್ಣ ಶೆಟ್ಟಿಯವರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಆಗದಂತೆ ಕ್ರಮ ಕೈಗೊಂಡರು. ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here