ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕೋಸ್ಟ್ ಗಾರ್ಡ್‌ನಿಂದ ಏಕೈಕ ಕನ್ನಡಿಗ ಮಿಥುನ್ ಕುಮಾರ್ ಸೇರ

0

ಪುತ್ತೂರು: ಗಣರಾಜ್ಯೋತ್ಸವದ ಪ್ರಯುಕ್ತ ಹೊಸದಿಲ್ಲಿಯ ಕರ್ತವ್ಯ ಪಥದಲ್ಲಿ ಜ. 26 ರಂದು ನಡೆದ ಪಥಸಂಚಲನದಲ್ಲಿ ಭಾರತೀಯ ತಟರಕ್ಷಣಾ ಪಡೆ (ಕೋಸ್ಟ್‌ಗಾರ್ಡ್)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾಣಿ-ಬುಡೋಳಿ ಸಮೀಪದ ಸೇರ ಮಿಥುನ್ ಕುಮಾರ್ ಭಾಗವಹಿಸಿದ್ದರು.ಅವರು ಈ ಬಾರಿ ಕೋಸ್ಟ್ ಗಾರ್ಡ್‌ನಿಂದ ಪಥಸಂಚಲನದಲ್ಲಿ ಪಾಲ್ಗೊಂಡ ಏಕೈಕ ಕನ್ನಡಿಗರಾಗಿರುತ್ತಾರೆ. ಮಿಥುನ್ ಸೇರ ಕಳೆದ 4 ವರ್ಷಗಳಿಂದ ತಟರಕ್ಷಣ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


ಪಥ ಸಂಚಲನದಲ್ಲಿ ಕೋಸ್ಟ್‌ಗಾರ್ಡ್‌ನ ಒಂದು ತಂಡದಲ್ಲಿ 144 ಮಂದಿ ಸದಸ್ಯರಿದ್ದು, ಮಿಥುನ್‌ರವರು ನ.1ರಿಂದ ತರಬೇತಿ ಪಡೆದು, ಜನವರಿ ಬಳಿಕ ಹೊಸದಿಲ್ಲಿಯ ಕರ್ತವ್ಯ ಪಥದಲ್ಲಿ ತರಬೇತಿ ನಡೆದಿತ್ತು. ಮಾಣಿ, ಮೊಡಂಕಾಪು, ವಳಚ್ಚಿಲ್‌ನಲ್ಲಿ ವಿದ್ಯಾಭ್ಯಾಸ ಪೂರೈಸಿದ ಇವರು ಸೇರ ನಿವಾಸಿ ಕೃಷ್ಣಪ್ಪ ಪೂಜಾರಿ ಮತ್ತು ಭಾರತಿಯವರ ಪುತ್ರ.

LEAVE A REPLY

Please enter your comment!
Please enter your name here