ನೆಕ್ಕಿಲಾಡಿಯ ಬೀತಲಪ್ಪು ಶ್ರೀಮಹಾದೇವಿ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ

0

ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶನಗರ ಸಮೀಪದ ಬೀತಲಪ್ಪು ಎಂಬಲ್ಲಿರುವ ಶ್ರೀ ಮಹಾದೇವಿ(ಜಗದಾಂಬಾ) ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಬೀತಲಪ್ಪು ಶ್ರೀ ಮಹಾದೇವೀ ಕ್ಷೇತ್ರ(ಜಗದಾಂಬಾ)ದಲ್ಲಿ ಶ್ರೀ ಮಹಾದೇವೀ, ವಾಸುಕೀ ನಾಗರಾಜ, ಕೊರಗಜ್ಜ, ಕಲ್ಲುರ್ಟಿ, ಪಂಜುರ್ಲಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವವನ್ನು ಮೇ 3ರಿಂದ 5ರವರೆಗೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದ್ದು ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದೆ.

ವೇದಮೂರ್ತಿ ಸುದರ್ಶನ್ ಬಲ್ಲಾಳರವರ ನಿರ್ದೇಶನದಂತೆ ಕರಿಯಡ್ಕ ಬಾಲಚಂದ್ರ ಭಟ್ ಪೌರೋಹಿತ್ಯದಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಕಾರ್ಯ ನಡೆಯಲಿದೆ. ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಂಜಿತ್, ಕಾರ್ಯಕಾರಿ ಸಮಿತಿಯ ವ್ಯವಸ್ಥಾಪಕ ಜಗನ್ನಾಥ್, ಉಪಾಧ್ಯಕ್ಷ ಸುಕುಮಾರ, ಕಾರ್ಯದರ್ಶಿ ಹರೀಶ್ ಯಸ್., ಖಜಾಂಜಿಗಳಾದ ಆನಂದ ನಾಯ್ಕ, ತಾರನಾಥ, ಉಪಕಾರ್ಯದರ್ಶಿ ವಸಂತ ಗೌಡ, ಆರ್ಥಿಕ ಸಂಪನ್ಮೂಲ ಸಂಗ್ರಾಹಕರಾದ ಉಷಾ, ಸಮಿತಿ ಸದಸ್ಯರಾದ ಸುಮಿತ್ರ, ಉಷಾ, ರೋಹಿಣಿ, ಸೌಂದರ್ಯ, ಚಂದ್ರಶೇಖರ ಮತ್ತು ಗಣೇಶ್ ನೇತೃತ್ವದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ.

LEAVE A REPLY

Please enter your comment!
Please enter your name here