ಬಾಕಿಲಗುತ್ತುವಿನಲ್ಲಿ ನವಕ ಕಲಶ ಪ್ರೋಕ್ಷಣೆ, ಗರಡಿ ಕ್ಷೇತ್ರದಲ್ಲಿ ಬೆರ್ಮೆರೆ ಬಲಿ, ಬೈದೇರುಗಳ ದರ್ಶನ

0

ವಿಟ್ಲ: ಬಂಟ್ವಾಳ ತಾಲೂಕಿನ ಅನಂತಾಡಿ ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ, ಹೊಸಮ್ಮ, ಶ್ರೀ ಬ್ರಹ್ಮಬೈದರ್ಕಳ ಗರಡಿ, ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಗಳ ಕ್ಷೇತ್ರ ಬಾಕಿಲಗುತ್ತುವಿನಲ್ಲಿ ಜ.30 ರಂದು ಫೆ.3 ರ ವರೆಗೆ ನಡೆಯಲಿರುವ ಪ್ರತಿಷ್ಠಾದಿನಾಚರಣೆ ಹಾಗೂ ನೇಮೋತ್ಸವದ ಪ್ರಥಮ ದಿನವಾದ ಜ.30ರಂದು ಬೆಳಗ್ಗೆ ಶುದ್ಧಿ, ಗಣಹೋಮ, ನವಕ ಕಲಶ ಪ್ರೋಕ್ಷಣೆ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಗರಡಿ ಕ್ಷೇತ್ರದಲ್ಲಿ ಕಲಶಾಭಿಷೇಕ, ಗರಡಿ ಕ್ಷೇತ್ರದಲ್ಲಿ ಬೆರ್ಮೆರೆ ಬಲಿ, ಬೈದೇರುಗಳ ದರ್ಶನ ನಡೆದು ಅನ್ನಸಂತರ್ಪಣೆ ನಡೆಯಿತು.


ಬಾಕಿಲ ಗುತ್ತು ಆಡಳಿತ ಟ್ರಸ್ಟ್ ನ ಅಧ್ಯಕ್ಷರಾದ ವಸಂತ ಪೂಜಾರಿ ಎ. ಮಂಗಳೂರು, ಪ್ರಧಾನ ಕಾರ್ಯದರ್ಶಿ ಹರೀಶ್ ಸಾಲ್ಯಾನ್ ಮಂಗಳೂರು, ಕೋಶಾಧಿಕಾರಿ ಲಕ್ಷ್ಮಣ ಪೂಜಾರಿ ಬಾಕಿಲಗುತ್ತು, ಜತೆಕಾರ್ಯದರ್ಶಿ ಸಂಕಪ್ಪ ಪೂಜಾರಿ ಮಾಡಾವು, ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ, ಬಗ್ಗಪೂಜಾರಿ ಬಗ್ಗಪೀಠ, ಪದ್ಮಪೂಜಾರಿ ಇಡೆಮುಂಡೇವು ಗುತ್ತು, ಮಲರಾಯ ಮಾಣಿ ರಾಮಣ್ಣ ಗೌಡರು, ರೇಣುಕಾ ಕಣಿಯೂರು, ಟ್ರಸ್ಟಿಗಳಾದ ಜನಾರ್ದನ ಪೂಜಾರಿ ಬಾಕಿಲಗುತ್ತು, ಸುರೇಶ್ ಸಾಲ್ಯಾನ್ ಬಾಕಿಲಗುತ್ತು, ಶೈಲೇಶ್ ಕುಮಾರ್ ಅಗತ್ತಾಡಿ, ಚಂದ್ರಶೇಖರ ಗೋಳಿಕಟ್ಟೆ, ಪುಷ್ಪ ಬಾಕಿಲಗುತ್ತು, ಕೃಷ್ಣ ಶಾಂತಿ ಪಾಣೆರಮಜಲು, ವಾರಿಜ ವಸಂತ ಸುವರ್ಣ ಕೆಂಗುಡೆಲು ಸಹಿತ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಇಂದು ದೈವಸ್ಥಾನದಲ್ಲಿ ಹೊಸಮ್ಮ, ವೈದ್ಯನಾಥ ನೇಮ
ಜ.31ರಂದು ಬೆಳಗ್ಗೆ ಹರಿಸೇವೆ, ಮಧ್ಯಾಹ್ನ ಮಹಾಪೂಜೆ, ಹೊಸಮ್ಮ ಭಂಡಾರ ಇಳಿಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕುಟುಂಬಸ್ಥರ ಮಕ್ಕಳಿಗೆ ವಿದ್ಯಾನಿಧಿ ಸಹಾಯಧನ ವಿತರಣೆ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ ಸೆಲ್ಲೆದಿಕೋಲ, ಹೊಸಮ್ಮ ನೇಮ, ಜಾನು ಬೈದ್ಯ ಕೋಲ, ವೈದ್ಯನಾಥ ನೇಮ ನಡೆಯಲಿದೆ.

LEAVE A REPLY

Please enter your comment!
Please enter your name here