ನಿಡ್ಪಳ್ಳಿ ಶಾಲಾ ಶಿಕ್ಷಕಿಯರಿಗೆ ಬೀಳ್ಕೋಡುಗೆ ಕಾರ್ಯಕ್ರಮ

0

ನಿಡ್ಪಳ್ಳಿ; ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಶಿಕ್ಷಕಿ ಸರಸ್ವತಿ ಮತ್ತು ನರಿಮೊಗರು ಶಾಲೆಗೆ ವರ್ಗಾವಣೆ ಗೊಂಡ ಶಿಕ್ಷಕಿ ಶಾರದಾ ಇವರಿಗೆ ಬೀಳ್ಕೋಡುಗೆ ಕಾರ್ಯಕ್ರಮ ಎ.9 ರಂದು ನಡೆಯಿತು. ಅಲ್ಲದೆ ಏಳನೇ ತರಗತಿ ವಿದ್ಯಾರ್ಥಿಗಳಿಗೂ ಈ ಸಂದರ್ಭದಲ್ಲಿ ಬೀಳ್ಕೋಡುವ ಕಾರ್ಯಕ್ರಮ ನಡೆಯಿತು. 
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕರುಣಾಕರ ರೈ ಮುಂಡೂರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಲಿಂಗಪ್ಪ ನಾಯ್ಕ, ಶಾಲಾಭಿವೃದ್ದಿ ಸಮಿತಿಯ ಮಾಜಿ ಅಧ್ಯಕ್ಷ ಗಂಗಾಧರ ಸಿ.ಎಚ್ ಶುಭ ಹಾರೈಸಿದರು.ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ   ತುಳಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೀಳ್ಕೋಡುಗೆ ಗೊಂಡ ಶಿಕ್ಷಕಿಯರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ವಿದ್ಯಾರ್ಥಿನಿ ಅಂಕಿತಾ ಅನಿಸಿಕೆ ವ್ಯಕ್ತ ಪಡಿಸಿದಳು.
ಶಿಕ್ಷಕಿಯರಿಬ್ಬರು ಶಾಲೆಗೆ ಗ್ರೈಂಡರ್ ಒಂದನ್ನು ಕೊಡುಗೆಯಾಗಿ ನೀಡಿದರು.ಏಳನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಟಿಪಾಯಿ ಒಂದನ್ನು ಕೊಡುಗೆಯಾಗಿ ನೀಡಿದರು.
 
ಸಹಶಿಕ್ಷಕಿ ಹೇಮಾ ಸ್ವಾಗತಿಸಿ, ಮುಖ್ಯ ಗುರು ಉದಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಶಿಕ್ಷಕಿ ಕುಸುಮ. ಸಿ ಸನ್ಮಾನಿತರ ಪರಿಚಯ ವಾಚಿಸಿದರು. ಅತಿಥಿ ಶಿಕ್ಷಕಿ ಸುಮ.ಡಿ ವಂದಿಸಿ ಅತಿಥಿ ಶಿಕ್ಷಕಿ ಭೂದೇವಿ ಕಾರ್ಯಕ್ರಮ ನಿರೂಪಿಸಿದರು.ಅಂಗನವಾಡಿ ಕಾರ್ಯಕರ್ತೆ ಜಯಂತಿ.ಕೆ, ಸಹಾಯಕಿ ಜಯಲಕ್ಷ್ಮೀ, ಅಡುಗೆ ಸಿಬ್ಬಂದಿಗಳಾದ ತೆರೆಸಾ ಡಿ.”ಸೋಜಾ, ಕಾವೇರಿ,  ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here