ಮಾಂಡೋವಿ ಮೋಟಾರ್‍ಸ್‌ನ ಉಪ್ಪಿನಂಗಡಿ ಶಾಖೆಯಿಂದ ಗ್ರಾಮೀಣ ಮಹೋತ್ಸವ ಆರಂಭ- ಮಾ.15ರಂದು ಕೊನೆ

0

ಪುತ್ತೂರು: ಮಾರುತಿ ಸುಜುಕಿಯ ಅಧಿಕೃತ ವಿತರಕರಾದ ಮಾಂಡೋವಿ ಮೋಟಾರ್‍ಸ್‌ನ ಉಪ್ಪಿನಂಗಡಿ ಶಾಖೆ ವತಿಯಿಂದ ಸವಣೂರಿನಲ್ಲಿ ಗ್ರಾಮೀಣ ಎರಡು ದಿನಗಳ ಗ್ರಾಮೀಣ ಮಹೋತ್ಸವ ಮಾ.14 ರಂದು ಉದ್ಘಾಟನೆಗೊಂಡಿತು. ಸವಣೂರು ಎಸ್‌ಸಿಡಿಸಿಸಿ ಬ್ಯಾಂಕ್ ಶಾಖಾ ಪ್ರಭಂಧಕ ವಿಶ್ವನಾಥ ಎಸ್., ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಪಿ.ಚಂದ್ರಶೇಖರ್, ಸವಣೂರು ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅರ್ತಿಕೆರೆಯವರು ಕಾರ್ಯಕ್ರಮ ಉದ್ಘಾಟಿಸಿದರು. ಮಾಂಡೋವಿ ಮೋಟಾರ್‍ಸ್‌ನ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಸುಜಿತ್ ಕುಮಾರ್ ಸ್ವಾಗತಿಸಿದರು. ಉಪ್ಪಿನಂಗಡಿ ಶಾಖೆಯ ಸೀನಿಯರ್ ರಿಲೇಶನ್‌ಶಿಪ್ ಮೆನೇಜರ್   ಶ್ರೀ ಹರ್ಷ ರೈ ಕಾರ್ಯಕ್ರಮ ನಿರೂಪಿಸಿದರು. ಮಾಂಡೋವಿ ಮೋಟಾರ್‍ಸ್ ಸಿಬಂದಿಗಳಾದ ಪ್ರದೀಪ್ ರೈ ಸೊರಕೆ, ಸುಮಿತ್ ಎನ್., ಹರಿಕಿರಣ್ ರೈ ಎಸ್., ಗಿರೀಶ್ ಕುಮಾರ್, ರಾಜೇಶ್ ಎನ್.ಎಸ್, ನರೇಶ್ ದೇರ್ಕಾಜೆ, ನವೀನ್ ಕುಮಾರ್ ಉಪಸ್ಥಿತರಿದ್ದರು.


ಗ್ರಾಮೀಣ ಮಹೋತ್ಸವದಲ್ಲಿ ಮಾರುತಿ ಸುಜುಕಿಯ ಆಲ್ಟೋ, ಸೆಲೆರಿಯೊ, ಇಕೋ, ವ್ಯಾಗನರ್, ಬ್ರೀಝಾ, ಸ್ವಿಫ್ಟ್ ಹಾಗೂ ಎಸ್.ಪ್ರೆಸ್ಸೊ ಕಾರುಗಳ ಮೇಲೆ ಉಳಿತಾಯವಕಾಶ ಲಭ್ಯವಿದೆ.

LEAVE A REPLY

Please enter your comment!
Please enter your name here