ನೀರಕಟ್ಟೆ: ಬುಲೆಟ್ ಟ್ಯಾಂಕರ್‌ನ ಹಿಂಬದಿ ಡಿಕ್ಕಿ, ತೋಡಿಗೆ ಬಿದ್ದ ಕಾರು

0

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ ೭೫ರ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿರುವ ಅಪಾಯಕಾರಿ ತಿರುವಿನಲ್ಲಿ ಬುಲೆಟ್ ಟ್ಯಾಂಕರ್‌ನ ಹಿಂಬದಿ ಡಿಕ್ಕಿಯಾದ ಪರಿಣಾಮ ಕಾರು ಪಕ್ಕದ ತೋಡಿಗೆ ಬಿದ್ದ ಘಟನೆ ಜ.13ರಂದು ಸಂಜೆ ನಡೆದಿದೆ.

ಮಂಗಳೂರಿನಿಂದ ಸಕಲೇಶಪುರಕ್ಕೆ ತೆರಳುತ್ತಿದ್ದ ಬ್ರೀಝಾ ಕಾರಿಗೆ ನೀರಕಟ್ಟೆ ತಿರುವಿನಲ್ಲಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬುಲೆಟ್ ಟ್ಯಾಂಕರ್‌ನ ಹಿಂಭಾಗ ಡಿಕ್ಕಿಯಾಗಿದೆ. ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ಪಕ್ಕದ ತೋಡಿಗೆ ಬಿದ್ದಿದೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದ ಅಲ್ಪಸ್ವಲ್ಪ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ನೀರಕಟ್ಟೆಯಲ್ಲಿರುವ ಈ ತಿರುವು ಅಪಾಯಕಾರಿಯಾಗಿದ್ದು ಇಲ್ಲಿ ತಡೆಗೋಡೆಯೂ ಇಲ್ಲ. ಚಾಲಕರು ಸ್ವಲ್ಪ ಎಚ್ಚರ ತಪ್ಪಿದ್ದರೂ ಪಕ್ಕದ ತೋಡಿಗೆ ವಾಹನ ಪಲ್ಟಿಯಾಗುವ ಸಂಭವವೇ ಅಧಿಕವಾಗಿದೆ.

LEAVE A REPLY

Please enter your comment!
Please enter your name here