ಪಾಪೆತ್ತಡ್ಕ ಜುಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ

0

 

ಪುತ್ತೂರು: ಪಾಪೆತ್ತಡ್ಕ ಮುಹ್ಯಿಯದ್ದೀನ್ ಜುಮಾ ಮಸೀದಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಮಸೀದಿಯ ಉಪಾಧ್ಯಕ್ಷ ಉಸ್ಮಾನ್ ನೆಕ್ಕಿಲು ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಖತೀಬ್ ಯೂಸುಫ್ ಫೈಝಿ ತ್ಯಾಗರಾಜೆ ದುವಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕ ಅಬ್ದುಲ್ ರಹಿಮಾನ್ ಮೌಲವಿ ಕುಂಬ್ರ, ಮಸೀದಿಯ ಜೊತೆ ಕಾರ್ಯದರ್ಶಿ ಅಶ್ರಫ್ ಆನಾಜೆ. ಕೋಶಾಧಿಕಾರಿ ಮುಹಮ್ಮದ್ ಹಾಜಿ, ಪದಾಧಿಕಾರಿಗಳಾದ ಸಿ.ಕೆ ಅಬ್ದುಲ್ಲ, ಮಮ್ಮುಂಞಿ, ಸಮೂನ್, ಉಮ್ಮರ್, ಇರ್ಶಾದ್, ಇಬ್ರಾಹಿಂ ಇಂದಾರ್, ಇಬ್ರಾಹಿಂ ಬಿ ಟಿ, ಇಸ್ಮಾಯಿಲ್ ಜೆ.ಉಸ್ಮಾನ್, ಇಬ್ರಾಹಿಂ ಬೊಳ್ಳಮೆ, ಇಸ್ಮಾಯಿಲ್ ಪಾಪೆತ್ತಡ್ಕ, ಮತ್ತು ಜಮಾಅತರು, ಮದ್ರಸ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಸಿಹಿ ತಿಂಡಿ ವಿತರಣೆ ನಡೆಯಿತು. ಮಸೀದಿಯ ಕಾರ್ಯದರ್ಶಿ ಹನೀಫ್ ಐ.ಡಿ.ಸ್ವಾಗತಿಸಿದರು.

LEAVE A REPLY

Please enter your comment!
Please enter your name here