ಕೆದಂಬಾಡಿ ಇದ್ಪಾಡಿ ನೇಮೋತ್ಸವದ ಪ್ರಯುಕ್ತ ಶ್ರಮದಾನ

0

ಪುತ್ತೂರು: ಫೆ. 4 ಮತ್ತು 5 ರಂದು ನಡೆಯಲಿರುವ ಕೆದಂಬಾಡಿ ಗ್ರಾಮ ದೈವ ಶ್ರೀ ಶಿರಾಡಿ ದೈವಸ್ಥಾನ, ಇದ್ಪಾಡಿ, ಮಂಜಕೊಟ್ಯ- ಮುಂಡಾಳಗುತ್ತು ಇದರ ವಾರ್ಷಿಕ ನೇಮೋತ್ಸವದ ಪ್ರಯುಕ್ತ ದೈವಸ್ಥಾನದ ವಠಾರದಲ್ಲಿ ಶ್ರಮದಾನ ಜರಗಿತು. ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮತ್ತು ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸುಧಾಕರ ರೈ ಮುಂಡಾಳಗುತ್ತು, ಕಾರ್ಯದರ್ಶಿ ಪ್ರಭಾಕರ್ ರೈ ಮುಂಡಾಳಗುತ್ತು, ಕರುಣಾಕರ ರೈ ಅತ್ರೆಜಾಲು, ರಾಜೀವ ರೈ ಕೋರಂಗ, ದೇವಣ್ಣ ರೈ ಬೂಡಿಯಾರ್, ದಯಾಕರ ರೈ ಮುಂಡಾಳಗುತ್ತು, ಸೀತಾರಾಮ ಪೂಜಾರಿ, ಪೂರ್ಣಿಮಾ, ಜಾನಕಿ ಇದ್ಪಾಡಿ, ಇಂದಿರಾ ರೈ ಮುಂಡಾಳಗುತ್ತು, ಗೀತಾ, ಶೈಲಜಾ ರೈ ಮುಂಡಾಳಗುತ್ತು, ಸೀಮಾ ರೈ ಮುಂಡಾಳಗುತ್ತು, ಹೇಮಲತಾ ಸಹಿತ ಅನೇಕ ಮಂದಿ ಶ್ರಮದಾನದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here