ಪತ್ನಿಯನ್ನು ಕರೆದೊಯ್ಯುತ್ತಿದ್ದ ಅನ್ಯವ್ಯಕ್ತಿ ತಡೆದಾಗ ಕಾರು ಹಾಯಿಸಿ ಕೊಲೆಯತ್ನ -ಡಿವೈಎಸ್ಪಿಗೆ ದೂರು

0

ಪುತ್ತೂರು:ನನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವ ಉದ್ದೇಶದಿಂದ ವ್ಯಕ್ತಿಯೋರ್ವ ಕಾರಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ತಡೆಯಲು ಹೋದಾಗ ಕಾರು ಹಾಯಿಸಿ ಕೊಲೆಗೆ ಯತ್ನಿಸಿರುವುದಾಗಿ ಆರೋಪಿಸಿ ವ್ಯಕ್ತಿಯೋರ್ವರು ಪುತ್ತೂರು ಡಿವೈಎಸ್ಪಿಯವರಿಗೆ ದೂರು ನೀಡಿದ್ದಾರೆ.
ಬಂಟ್ವಾಳ ಪೆರುವಾಯಿ ಗ್ರಾಮದ ಕಿಣಿಯಪಾಲು ಮನೆ ದಿ.ಶ್ರೀಧರ ಮಣಿಯಾಣಿ ಎಂಬವರ ಮಗ ಸುಧೀರ್ ಕುಮಾರ್ ದೂರು ನೀಡಿದವರು.ತಾನು ಕಾಸರಗೋಡು ಮೂಲದ ಕಾವ್ಯಶ್ರೀ ಎಂಬವರನ್ನು ಮದುವೆಯಾಗಿದ್ದು, ನಮ್ಮ ದಾಂಪತ್ಯ ಜೀವನದಲ್ಲಿ ಒಂದು ಹೆಣ್ಣು ಮಗು ಇದೆ.ಈ ಮಧ್ಯೆ ಪತ್ನಿಯು ವಿಟ್ಲ ಕೇಪು ಮುಳಿಯಾಲದ ಹರಿಪ್ರಸಾದ್ ಯಾದವ್ ಬಿ.ಕೆ.ಎಂಬಾತನೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದು ಅವಳು ಪ್ರತ್ಯೇಕವಾಗಿ ವಾಸಿಸಿಕೊಂಡು ಬರುತ್ತಿದ್ದಾಳೆ.ಆದಾಗಿಯೂ ನಮ್ಮ ಮಧ್ಯೆ ಗಂಡ ಹೆಂಡತಿಯ ಸಂಬಂಧ ಮುಂದುವರಿಸಿಕೊಂಡು ಬಂದಿದ್ದು ನಮ್ಮೊಳಗೆ ಯಾವುದೇ ವಿವಾಹ ವಿಚ್ಚೇದನ ಆಗಿರುವುದಿಲ್ಲ.ಜ.31ರಂದು ಒಡಿಯೂರು ಜಾತ್ರೆಗೆಂದು ಬಂದಿದ್ದ ಪತ್ನಿಯನ್ನು ಆರೋಪಿ ಹರಿಪ್ರಸಾದ್ ಯಾದವ್ ಅವರ ಕಾರಲ್ಲಿ ಅನುಮಾನಾಸ್ಪದವಾಗಿ ಕರೆದುಕೊಂಡು ಹೋಗುತ್ತಿರುವ ಮಾಹಿತಿ ತಿಳಿದು ನಾನು ಮೋಟಾರು ಬೈಕಿನಲ್ಲಿ ಸದ್ರಿ ಕಾರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದಾಗ ಸುಳ್ಯ ತಾಲೂಕಿನ ಜಾಲ್ಸೂರು ಎಂಬಲ್ಲಿ ನಾನು ಕಾರನ್ನು ಮುಂದಿಕ್ಕಿ ಕಾರನ್ನು ನಿಲ್ಲಿಸಲು ಕೈ ಸನ್ನೆ ಮಾಡಿದಾಗ ಸದ್ರಿ ಕಾರನ್ನು ನನ್ನ ಮೇಲೆನೇ ಹಾಯಿಸಿ ನನ್ನನ್ನು ಕೊಲ್ಲುವ ಪ್ರಯತ್ನವನ್ನು ಮಾಡಿದಾಗ ನಾನು ಅಲ್ಲಿದ್ದ ನಾಮಫಲಕಕ್ಕೆ ಹಾಕಿದ ಕಂಬಕ್ಕೆ ಅಡ್ಡ ಬಂದ ಕಾರಣದಿಂದ ನಾನು ಬದುಕಿ ಉಳಿದಿರುತ್ತೇನೆ.ಆ ಸಂದರ್ಭದಲ್ಲಿ ಸ್ಥಳೀಯರನ್ನು ಕಂಡ ಆರೋಪಿಯು ಸ್ಥಳದಿಂದ ಓಡಿಹೋಗಿರುತ್ತಾರೆ. ಕಾರಿನಲ್ಲಿದ್ದ ನನ್ನ ಪತ್ನಿಯನ್ನು ಈ ಕುರಿತು ಪ್ರಶ್ನಿಸಿದಾಗ, ನನ್ನನ್ನು ತಡೆದರೆ ಮುಂದೆ ನಿನ್ನನ್ನು ಕೂಡ ರೌಡಿಗಳ ಮೂಲಕ ಕೊಲ್ಲಿಸದೆ ಬಿಡುವದಿಲ್ಲ ಎಂದು ಜೀವ ಬೆದರಿಕೆಯನ್ನು ಒಡ್ಡಿರುತ್ತಾಳೆ ಎಂದು ಸುಧೀರ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.ಆರೋಪಿ ಹರಿಪ್ರಸಾದ್ ಯಾದವ್ ನನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವ ದುರುದ್ದೇಶದಿಂದ ಅವಳನ್ನು ಪುಸಲಾಯಿಸಿ ಆತನ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋಗಿರುವುದಾಗಿದೆ ಎಂದೂ ದೂರಿನಲ್ಲಿ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here