ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕ-ಮಾಲಕರ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರು ಅವಿರೋಧ ಆಯ್ಕೆ

0

ಪುತ್ತೂರು:ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕ-ಮಾಲಕರ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.


ಸಹಕಾರಿ ಸಂಘದ ನವೀನ್ ಕುಮಾರ್ ಎಂ.ಎಸ್ ಅವರು ಚುನಾವಣಾ ಅಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿದರು. ಅಧ್ಯಕ್ಷರಾಗಿ ಸುರೇಶ್ ಸುಧಾಕರ್ ನಾಯಕ್, ಉಪಾಧ್ಯಕ್ಷರಾಗಿ ಬಿ.ಮೋಹನ್ ಹೆಗ್ಡೆಯವರನ್ನು ಪುನರಾಯ್ಕೆ ಮಾಡಲಾಯಿತು. ನಿರ್ದೇಶಕರಾಗಿ ಡಾ.ಎಂ.ಕೆ ಪ್ರಸಾದ್, ಬಿ.ಕೆ ದೇವಪ್ಪ ಗೌಡ, ಬಾಲಕೃಷ್ಣ ಗೌಡ, ಹುಸೈನ್ ಜಿ, ರಾಘವೇಂದ್ರ ರೈ, ರಾಜೇಶ್ ಕೆ, ಬಿ.ಜನಾರ್ದನ್, ಬಿ.ಕೆ.ಸುಂದರ ನಾಯ್ಕ್, ಎ.ಭಾಸ್ಕರ್ ನಾಯ್ಕ, ಕೆ.ಎಸ್. ಹರಿಣಾಕ್ಷಿ ಅವರು ನಿರ್ದೇಶಕರಾಗಿ ಅವಿರೋಧ ಆಯ್ಕೆಗೊಂಡರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರ್ವಮಂಗಳ ಮತ್ತು ಸಿಬ್ಬಂದಿ ಸ್ನೇಹ ಮತ್ತು ನಿತ್ಯನಿಧಿ ಸಂಗ್ರಾಹಕ ಮಹೇಶ್ ಪ್ರಭು ಮಣಿಯ, ರವಿಚಂದ್ರ ಎಸ್ ಸಹಕರಿಸಿದರು.

LEAVE A REPLY

Please enter your comment!
Please enter your name here