ಪುತ್ತೂರು: ಅಪಾಯದ ತಿರುವಿನಲ್ಲೊಂದಾದ ಸುದ್ದಿ ಬಿಡುಗಡೆ ಕಚೇರಿ ಬಳಿಯ ಹಳೆ ಬಜಾರ್ ಅಂಚೆ ಕಚೇರಿ ಎದುರು ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಫೆ.2ರ ರಾತ್ರಿ ನಡೆದಿದೆ.
ಪುತ್ತೂರು ಬಸ್ ನಿಲ್ದಾಣದ ಕಡೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ಭುವನೇಂದ್ರ ಕಲಾ ಮಂದಿರ ರಸ್ತೆ ಕಡೆಯಿಂದ ಮುಖ್ಯರಸ್ತೆಗೆ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಗೆ ಹಾನಿಯಾಗಿದ್ದು ಬೈಕ್ನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಆಗಾಗ ಅಪಘಾತ !: ಮೂರು ಕವಲೊಡೆದ ಈ ತಿರುವು ರಸ್ತೆಯಲ್ಲಿ ಆಗಾಗ ಅಪಘಾತಗಳು ನಡೆಯುತ್ತಿವೆ. ನೆಲ್ಲಿಕಟ್ಟೆ ಬಸ್ ನಿಲ್ದಾಣ ರಸ್ತೆ ಏಕ ಮುಖ ಸಂಚಾರ ರಸ್ತೆಯಾಗಿದೆ. ಆದರೆ ಭುವನೇಂದ್ರ ಕಲಾಮಂದಿರ ರಸ್ತೆಯಿಂದಾಗಿ ಬಸ್ ನಿಲ್ದಾಣದ ಕಡೆಗೆ ಹೋಗಲು ಬರುವ ವಾಹನಗಳಿಗೆ ಇಲ್ಲಿ ತಿರುವು ಇರುವುದರಿಂದ ಮುಖ್ಯರಸ್ತೆಯಿಂದ ಬಸ್ ನಿಲ್ದಾಣದ ಕಡೆಗೆ ಬರುವ ವಾಹನಗಳು ದಿಢೀರ್ ಕಾಣಿಸದೇ ಇರುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬಂಧಿಸಿದವರು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.