ಫೆ.5: ಮಹಾಬಲ-ಲಲಿತ ಕಲಾ ಸಭಾದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

0

ಪುತ್ತೂರು: ಮಹಾಬಲ-ಲಲಿತ ಕಲಾ ಸಭಾದ ವತಿಯಿಂದ ಆಯೋಜಿಸಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಫೆ.5ರಂದು ಸಂಜೆ ಪುತ್ತೂರು ಬಹುವಚನಂ ಪದ್ಮಿನಿ ಸಭಾಭವನದಲ್ಲಿ ಜರಗಲಿದೆ.

ಸಂಜೆ 4.30 ರಿಂದ ರಾತ್ರಿ 7.30 ರವರೆಗೆ ನಡೆಯುವ ಸಂಗೀತ ಕಛೇರಿಯಲ್ಲಿ ಹಾಡುಗಾರಿಕೆಯಲ್ಲಿ ವಿದ್ವಾನ್ ಅಭಿಲಾಷ್ ಗಿರಿಪ್ರಸಾದ್ ಚೆನ್ನೈ, ಪಿಟೀಲಿನಲ್ಲಿ ವಿದ್ವಾನ್ ಸುಮಂತ್ ಮಂಜುನಾಥ್ ಮೈಸೂರು, ಮೃದಂಗದಲ್ಲಿ ವಿದ್ವಾನ್ ಆನೂರು ವಿನೋದ್ ಶ್ಯಾಮ್ ಬೆಂಗಳೂರುರವರು ಭಾಗವಹಿಸಲಿದ್ದಾರೆ. ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಮಹಾಬಲ-ಲಲಿತ ಕಲಾ ಸಭಾದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಶ್ರೀಪ್ರಕಾಶ್ ಬಿ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here