ಕಾನತ್ತಡ್ಕ: ಹಿಂಬಾಗಿಲು ಮುರಿದು ಮನೆಯಿಂದ ಚಿನ್ನಾಭರಣ ಕಳವು

0

ವಿಟ್ಲ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ವಿಟ್ಲ ಸಮೀಪದ ಕಾನತ್ತಡ್ಕ ಎಂಬಲ್ಲಿ ನಡೆದಿದೆ.

ಕಾನತ್ತಡ್ಕ ಶಾಲೆಯ ಸಮೀಪದ ರಹೀಮ್ ಖಾನ್ ಎಂಬವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಮನೆಯವರೆಲ್ಲಾ ಶುಭಕಾರ್ಯಕ್ರಮ ನಿಮಿತ್ತ ತೆರಳಿರುವಾಗ ಈ ಘಟನೆ ಸಂಭವಿಸಿದೆ.

ಮನೆಯ ಒಳಗಿನ ಕೋಣೆಯೊಂದರಲ್ಲಿದ್ದ ಕಪಾಟಿನಲ್ಲಿರಿಸಲಾಗಿದ್ದ ಹದಿನೈದು ಪವನ್ ಚಿನ್ನದ ಒಡವೆ ಹಾಗೂ ಒಂದು ಲಕ್ಷ ರೂಪಾಯಿ ನಗದನ್ನು ಕಳವುಗೈದಿದ್ದು, ಮನೆ ಮಂದಿ ಮರಳಿ ಬಂದು ನೋಡಿದಾಗ ಹಿಂಬದಿಯ ಬಾಗಿಲು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮನೆಯೊಳಗಡೆ ಬಂದು ನೋಡಿದಾಗ ಕಳವು ಕೃತ್ಯ ಬೆಳಕಿಗೆ ಬಂದಿತ್ತು.

ಸ್ಥಳಕ್ಕೆ ಆಗಮಿಸಿ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here