ಫೆ 7, 8 – ದೈಪಿಲ ಕ್ಷೇತ್ರದಲ್ಲಿ ಶ್ರೀ ಶಿರಾಡಿ ರಾಜನ್ ದೈವ, ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ

0

ಕಾಣಿಯೂರು: ಕಾರಣಿಕ ಕ್ಷೇತ್ರವಾಗಿರುವ ಚಾರ್ವಾಕ ಗ್ರಾಮದ ದೈಪಿಲ ಕ್ಷೇತ್ರದಲ್ಲಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವವು ಫೆ 7 ಮತ್ತು ಫೆ 8ರಂದು ನಡೆಯಲಿದೆ. ಫೆ.7ರಂದು ಬೆಳಿಗ್ಗೆ ದೈಪಿಲ ಸ್ಥಾನದಲ್ಲಿ ಸ್ಥಳಶುದ್ಧಿ ಹಾಗೂ ಗಣಪತಿ ಹೋಮ, ಸಂಜೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಫೆ.8ರಂದು ಶ್ರೀ ಶಿರಾಡಿ ರಾಜನ್ ದೈವ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ, ಸೇವೆಗಳನ್ನು ಮತ್ತು ಹರಕೆಗಳನ್ನು ಒಪ್ಪಿಸುವ ಕಾರ್ಯಕ್ರಮ, ಅಪರಾಹ್ನ ಗಡಿಗೆ ಬಿಂದು ಒಪ್ಪಿಸುವ ಕಾರ್ಯಕ್ರಮ ನಡೆದು, ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಅರುವಗುತ್ತಿನ ಚಂದ್ರಕಲಾ ಜಯರಾಮ್, ಪ್ರದೀಪ್ ಆರ್ ಗೌಡರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here