ಮಂಜಲ್ಪಡ್ಪು ಕರ್ಗಲ್ ಕಾಮಗಾರಿ ಸ್ಪೆಷಲಿಸ್ಟ್ ವೀರಪ್ಪ ಗೌಡ ನಿಧನ

0

ಪುತ್ತೂರು:ಕರ್ಗಲ್(ಕಗ್ಗಲ್ಲು)ಕಾಮಗಾರಿಯ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿದ್ದ ಮಂಜಲ್ಪಡ್ಪು ನಿವಾಸಿ ವೀರಪ್ಪ ಗೌಡ(92ವ)ರವರು ಫೆ.4ರಂದು ತಡರಾತ್ರಿ ನಿಧನರಾದರು.

ವೀರಪ್ಪ ಗೌಡ ಅವರು ಕರ್ಗಲ್ ಕಟ್ಟುವ ಮೇಸ್ತ್ರಿಯಾಗಿದ್ದು, ಹಲವಾರು ತಡೆಗೋಡೆಗಳನ್ನು ನಿರ್ಮಿಸಿದ ಕೀರ್ತಿ ಇವರಿಗಿದೆ. ಇವರ ಕಾಮಗಾರಿಗಳನ್ನು ಗುರುತಿಸಿ ರೋಟರಿ ಸಂಸ್ಥೆಯಿಂದ ಪ್ರಶಸ್ತಿ ನೀಡಲಾಗಿತ್ತು. ಮೃತರು ಪುತ್ರರಾದ ಶ್ರೀಧರ್ ಗೌಡ, ನವೀನ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಫೆ.5ರಂದು ನಡೆಸಲಾಯಿತು.

LEAVE A REPLY

Please enter your comment!
Please enter your name here