ಪೆರ್ಲಂಪಾಡಿಯಲ್ಲಿ ಶ್ರೀಗಣೇಶ್ ಮೆಡಿಕಲ್ ಶುಭಾರಂಭ

0

ಪುತ್ತೂರು: ಪೆರ್ಲಂಪಾಡಿ ಅಂಬೆಡ್ಕರ್ ಭವನದ ಬಳಿಯಿರುವ ಪ್ರವೀಣ್ ಕಾಂಪ್ಲೆಕ್ಸ್‌ನಲ್ಲಿ ಫೆ.9ರಂದು ಶ್ರೀಗಣೇಶ್ ಮೆಡಿಕಲ್ ಶುಭಾರಂಭಗೊಂಡಿತು.


ಕೊಳ್ತಿಗೆ ಗ್ರಾ.ಪಂ. ಸದಸ್ಯ ಪ್ರಮೋದ್ ಕೆ.ಎಸ್., ರಿಬ್ಬನ್ ಕಟ್ ಮಾಡಿದರು. ಈಶ್ವರಮಂಗಲ ಗಜಾನನ ಆ.ಮಾ.ಶಾಲೆಯ ನಿರ್ದೇಶಕ ಶಿವರಾಮ ಭಟ್ ಬೀರ್ನಕಜೆ ಹಾಗೂ ಬೆಳ್ಳಾರೆ ಗಣೇಶ್ ಮೆಡಿಕಲ್‌ನ ವಿಘ್ನೇಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷ ಶ್ಯಾಮ ಸುಂದರ ರೈ ಕೆರೆಮೂಲೆ, ಪುತ್ತೂರು ಎಪಿಎಂಸಿ ಮಾಜಿ ಸದಸ್ಯ ತೀರ್ಥಾನಂದ ದುಗ್ಗಳ, ವರ್ತಕ ಸಂಘದ ಅಧ್ಯಕ್ಷ ವೆಂಕಟರಮಣ ಆಚಾರ್ಯ, ಕೊಳ್ತಿಗೆ ಗ್ರಾ.ಪಂ.ಸದಸ್ಯ ಪವನ್ ಕುಮಾರ್, ವಿಜಯಬ್ಯಾಂಕ್ ನಿವೃತ್ತರಾದ ಬಾಬುರಾಜೇಂದ್ರ, ಗ್ರಾ.ಪಂ ಉಪಾದ್ಯಕ್ಷೆ ನಾಗವೇಣಿ, ಸದಸ್ಯೆ ಯಶೋಧ, ಪೆರ್ಲಂಪಾಡಿ ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ ಗುರುವಪ್ಪ, ಪೆರ್ಲಂಪಾಡಿ ಆರೋಗ್ಯ ಕೇಂದ್ರದ ಮಹೇಂದ್ರ ಕುಮಾರ್, ಕಟ್ಟಡದ ಮಾಲಕ ಪಲನಿಮುತ್ತು ಪೆರ್ಲಂಪಾಡಿ, ನರಿಮೊಗರು ಗ್ರಾ.ಪಂ.ಸದಸ್ಯೆ ಪುಷ್ಪಾವತಿ, ಜ್ಯೋತಿಷ್ಯ ನಿತಿನ್ ಬಲ್ಯಾಯ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು.


ಮಹೇಶ್ ಪಿ.ಕೆ. ಸ್ವಾಗತಿಸಿದರು. ಮಾಲಕ ದಿನೇಶ್ ಪಿ.ಕೆ. ಮಾತನಾಡಿ ಅಲೋಪತಿ, ಆಯುರ್ವೇದ ಮತ್ತು ಪಶು ಔಷಧಗಳು, ಸರ್ಜಿಕಲ್ ಸಾಮಾಗ್ರಿಗಳು ಹಾಗೂ ಸೌಂದರ್ಯವರ್ಧಕಗಳು ದೊರೆಯುತ್ತವೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿ ವಂದಿಸಿದರು. ವೇದಾವತಿ ಕೆ.ನಾಯ್ಕ್, ಶ್ವೇತಾ ಮಹೇಶ್, ದೀಕ್ಷಾ ಪಿ.ಕೆ., ಆದ್ವಿ ಎಂ. ನವೀನ್, ಜಿತೇಶ್, ವಿನ್ಯಾಸ್ ಮತ್ತು ದಿನೇಶ್ ಅಡೂರು ಸಹಕರಿಸಿದರು.

LEAVE A REPLY

Please enter your comment!
Please enter your name here