ಕುಂಬ್ರ: ಗಾಯಾಳು ವಿದ್ಯಾರ್ಥಿಗೆ ನೆರವು

0

ಪುತ್ತೂರು: ಕಳೆದ ಕೆಲದಿನಗಳ ಹಿಂದೆ ಅಪಘಾತದಿಂದ ಗಾಯಗೊಂಡಿದ್ದ ಕುಂಬ್ರ ಕೆಪಿಎಸ್ ಸ್ಕೂಲ್ ವಿದ್ಯಾರ್ಥಿ ಕೊಯಿಲತ್ತಡ್ಕ ಜನತಾ ಕಾಲನಿ ನಿವಾಸಿ ಶಿಹಾಬ್ ಎಂಬ ವಿದ್ಯಾರ್ಥಿಗೆ ಕಾಂಗ್ರೆಸ್ ಮುಖಂಡ ಕೋಡಿಂಬಾಡಿ ಅಶೋಕ್ ರೈಯವರು ಶಾಲಾ ಯುನಿಫಾರಂ ಸೇರಿದಂಥೆ ಬಟ್ಟೆಗಳನ್ನು ದಾನವಾಗಿ ನೀಡಿದ್ದಾರೆ. ಒಳಮೊಗ್ರು ವಲಯ ಕಾಂಗ್ರೆಸ್ ಮುಖಾಂತರ ಅಧ್ಯಕ್ಷರಾದ ಅಶೋಕ್‌ಪೂಜಾರಿ ಬೊಳ್ಳಾಡಿ ಯವರು ವಿದ್ಯಾರ್ಥಿ ಕುಟುಂಬಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಸದಸ್ಯರುಗಳಾದ ಚಿತ್ರಾ ಬಿ ಸಿ, ಶಾರದಾ, ಶೀನಪ್ಪ ನಾಯ್ಕ್, ವಲಯ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಬೊಳ್ಳಾಡಿ, ಕಾಂಗ್ರೆಸ್ ಮುಖಂಡೆ ರೇಶ್ಮಾ ಮೆಲ್ವಿನ್ ಹಾಗೂ ಚೆನ್ನ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here