ಭಾರತ್ ಅಟೋ ಕಾರ್ಸ್ ಮಾರುತಿ ಗ್ರಾಮೀಣ ಮಹೋತ್ಸವಕ್ಕೆ ಅದ್ದೂರಿ ಚಾಲನೆ – ಕಾರು ಪ್ರಿಯರಿಂದ ಅತ್ಯುತ್ತಮ ಬೆಂಬಲ…

0

ಪುತ್ತೂರು : ಪ್ರಮುಖ ಮಾರುತಿ ಕಾರು ಡೀಲರ್ ಭಾರತ್ ಅಟೋ ಕಾರ್ಸ್ ವತಿಯಿಂದ ಅಯೋಜನೆಗೊಂಡಿರುವ ಗ್ರಾಮೀಣ ಮಹೋತ್ಸವವನ್ನು ಫೆ.17 ರಂದು ಮುಖ್ಯರಸ್ತೆ ಕೆ.ಪಿ.ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕಿ ಮಮತಾ ಶ್ರೀವಾಸ್ತವ್ ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು.

ವಕೀಲರ ಸಂಘದ ಪ್ರ.ಕಾ. ಚಿನ್ಮಯಿ ಈಶ್ವರಮಂಗಲ ಮಾತನಾಡಿ, ಸುಮಾರು 15 ವರುಷಗಳಿಂದ ನಾನೂ ಭಾರತ್ ಅಟೋ ಕಾರ್ಸ್ ಗ್ರಾಹಕನಾಗಿದ್ದೇನೆ. ಈ ಅವಧಿಯಲ್ಲಿ ಉತ್ತಮ ಸೇವೆ ಕೊಟ್ಟಿದ್ದಾರೆ. ಸಂಸ್ಥೆ ಮೂಲಕ ಗ್ರಾಮೀಣ ಗ್ರಾಹಕರಿಗೆ ಅತ್ಯುತ್ತಮ ಸೇವೆಯೂ ಸಿಕ್ಕಿದೆ, ಇನ್ನೂ ಹೆಚ್ಚಿನ ಸೇವೆಯೂ ಸಂಸ್ಥೆಯಿಂದ ಸಿಗಲಿದೆಯೆಂದು ಹಾರೈಸಿದರು.

ಉದ್ಯಮಿ ಗಣೇಶ್ ನೈತಾಡಿ ಹಾಗೂ ಧರ್ಣಪ್ಪ ಗೌಡ ಪಡ್ನೂರು , ವರ್ಕ್ ಶಾಪ್ ಮ್ಯಾನೇಜರ್ ಆನಂದ್ ಮೂಲ್ಯ ಹಾಗೂ ಟೀಂ ಲೀಡರ್ ಜಯರಾಜ್ ವೇದಿಕೆಯಲ್ಲಿ ಹಾಜರಿದ್ದರು.

ಆನಂದ್ ಮೂಲ್ಯ ಮತ್ತು ಜಯರಾಜ್ ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.

ಭಾರತ್ ಅಟೋ ಕಾರ್ಸ್ ಹಾಗೂ ಟ್ರೂ ವ್ಯಾಲ್ಯು ವಿಭಾಗದ ಸಿಬಂದಿಗಳೂ, ಗ್ರಾಹಕರು ಉಪಸ್ಥಿತರಿದ್ದರು. ಫೈನಾನ್ಸ್ ವಿಭಾಗದ ಜಯರಾಮ್ ನಿರೂಪಿಸಿದರು.

ಟೀಂ ಲೀಡರ್ ಜಯರಾಜ್ ಮಾತನಾಡಿ , ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಮಹೋತ್ಸವದಲ್ಲಿ, ಎಲ್ಲಾ ಮಾದರಿಯ ಮಾರುತಿ ಕಾರುಗಳ ಫ್ರಿ ಚೆಕ್ ಆಪ್ ಕ್ಯಾಂಪ್, ವಿನೂತನ ಹಾಗೂ ಉತ್ತಮ ಸ್ಥಿತಿಯಲ್ಲಿನ ಹಳೆ ಕಾರುಗಳ ಪ್ರದರ್ಶನ, ಖರೀದಿಗೆ ನೂರು ಶೇಕಡಾ ಸಾಲ ಸೌಲಭ್ಯದ ಜೊತೆಗೆ 78 ಸಾವಿರಕ್ಕೂ ಮಿಕ್ಕಿ ಉಳಿತಾಯ ಕೊಡುಗೆಗಳೂ ಇದ್ದು, ಕಾರು ಪ್ರಿಯರು ಮಹೋತ್ಸವ ದ ಪ್ರಯೋಜನ ಪಡೆಯುವಂತೆ ಕೋರಿದರು.

LEAVE A REPLY

Please enter your comment!
Please enter your name here