![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ವಿಟ್ಲ: ಇಡ್ಕಿದು ಗ್ರಾಮದ ಸೂರ್ಯ ಸಮೀಪದ ಅರ್ಕೆಚಾರ್ ಕುಮೇರು ಎಂಬಲ್ಲಿ ರಾತ್ರಿ ವೇಳೆ ಮಲಗಿದ್ದ ವ್ಯಕ್ತಿಯೋರ್ವರು ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಪೂರ್ಲಿಪ್ಪಾಡಿ ನಿವಾಸಿಯೋರ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಇಡ್ಕಿದು ಗ್ರಾಮದ ಸೂರ್ಯ ಸಮೀಪದ ಅರ್ಕೆಜಾರ್ ಕುಮೇರು ದಿ. ವಾಸು ನಾಯ್ಕ ರವರ ಪುತ್ರ ಅರವಿಂದ ಭಾಸ್ಕರ್ (37 ವ.) ಮೃತ ವ್ಯಕ್ತಿಯಾಗಿದ್ದಾರೆ. ಮೃತರು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು.
ಬಾಸ್ಕರ್ ರವರು ಫೆ.25ರಂದು ರಾತ್ರಿ ಊಟಮಾಡಿ ಮಲಗಿದ್ದು, ಮರುದಿನ ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಆರಂಭದಲ್ಲೇ ಬಾಸ್ಕರ ರವರ ಸಾವಿನಲ್ಲಿ ಹಲವಾರು ಅನುಮಾನಗಳು ಉಂಟಾಗಿತ್ತು. ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದ ಪೊಲೀಸರು ಪೂರ್ಲಿಪ್ಪಾಡಿ ನಿವಾಸಿ ವ್ಯಕ್ತಿಯೋರ್ವರನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ.