ಪುತ್ತೂರು ಜೇಸಿಐನ ಮಾಸಿಕ ಸಭೆ

0

ಪುತ್ತೂರು: ಪುತ್ತೂರು ಜೇಸಿಐನ ಫೆಬ್ರವರಿ ತಿಂಗಳ ಸದಸ್ಯರ ಸಭೆ ಅಪರಂಜಿ ಮುಳಿಯ ರೂಫ್ ಗಾರ್ಡನ್ಸ್‌ನಲ್ಲಿ ಜೇಸಿ ಅಧ್ಯಕ್ಷ ಜೆಸಿ ಸುಹಾಸ ಎಪಿಎಸ್ ಮರಿಕೆರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜೆಸಿ ವಲಯ ಹದಿನೈದರ ಪ್ರಾಂತ್ಯ ಎ. ಇದರ ಉಪಾಧ್ಯಕ್ಷ ಜೆಸಿ ದೇವರಾಜ್ ಕುದ್ಪಾಜೆ ಘಟಕ ಅಧಿಕಾರಿಗಳಿಗೆ ಘಟಕ ನಿರ್ವಹಣೆ ಮತ್ತು ಅಭಿವೃದ್ಧಿ ವಿಷಯದಲ್ಲಿ ತರಬೇತಿ ನೀಡಿದರು.

ಮೆಸ್ಕಾಂ ಲೈನ್‌ಮ್ಯಾನ್ ಮೌನೇಶ್ ಅಡಪದರವರನ್ನು ಸೆಲ್ಯೂಟ್‌ದ ಸೈಲೆಂಟ್ ವರ್ಕರ್ ಎಂಬ ಶೀರ್ಷಿಕೆ ಅಡಿಯಲ್ಲಿ ಸನ್ಮಾನಿಲಾಯಿತು. ವಲಯ ಹದಿನೈದರ ಅಧ್ಯಕ್ಷ ಜೆಸಿ ಪುರುಷೋತ್ತಮ ಶೆಟ್ಟಿ ಹಾಗೂ ಪೂರ್ವ ಅಧ್ಯಕ್ಷರುಗಳು ಮತ್ತು ವಲಯ ಅಧಿಕಾರಿಗಳು ಉಪಸ್ಥಿತರಿದ್ದರು.

ಜೇಸಿ ದೀಕ್ಷಾ ಪಾರ್ವತಿ ಸ್ವಾಗತಿಸಿ, ಕಾರ್ಯದರ್ಶಿ ಜೇಸಿ ಕಾರ್ತಿಕ್ ಬೀರಮೂಲೆ ವಂದಿಸಿದರು.

LEAVE A REPLY

Please enter your comment!
Please enter your name here